Followers

Followers somaling m uppar

Tuesday, September 30, 2025

SBI CARD💳

ಯಾವುದೇ ಅನಿರೀಕ್ಷಿತ ದಂಡಗಳನ್ನು ತಪ್ಪಿಸಲು ಮತ್ತು ಉತ್ತಮ ಕ್ರೆಡಿಟ್ ಇತಿಹಾಸವನ್ನು ಕಾಪಾಡಿಕೊಳ್ಳಲು, ಕಾರ್ಡ್‌ದಾರರು ಈ ಹೊಸ ಶುಲ್ಕ ರಚನೆಯ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಥರ್ಡ್ ಪಾರ್ಟಿ ಆಯಪ್‌ಗಳ ಮೂಲಕ ಶಿಕ್ಷಣ ಪಾವತಿಗಳ ಶುಲ್ಕ

CRED, Cheq, ಮತ್ತು MobiKwik ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಪಾವತಿಗಳ ಮೇಲೆ ಎಸ್‌ಬಿಐ ಕಾರ್ಡ್ ಈಗ ವಹಿವಾಟು ಮೊತ್ತದ 1% ರಷ್ಟನ್ನು ಶುಲ್ಕವಾಗಿ ವಿಧಿಸಲು ನಿರ್ಧರಿಸಿದೆ. ಆದಾಗ್ಯೂ, ಶಾಲೆಗಳು, ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಿಗೆ ನೇರವಾಗಿ SBI ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಆನ್-ಸೈಟ್ POS ಯಂತ್ರಗಳ ಮೂಲಕ ಮಾಡುವ ಪಾವತಿಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ. ಈ ಹೊಸ ಶುಲ್ಕವು MCC ಕೋಡ್‌ಗಳು 8211, 8220, 8241, 8244, 8249, 8299 ಅಡಿಯಲ್ಲಿ ಗುರುತಿಸಲಾದ ಮೂರನೇ ವ್ಯಕ್ತಿಯ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ.

₹1,000 ಕ್ಕಿಂತ ಹೆಚ್ಚಿನ ವ್ಯಾಲೆಟ್ ಲೋಡ್ ವಹಿವಾಟುಗಳ ಶುಲ್ಕ

₹1,000 ಕ್ಕಿಂತ ಹೆಚ್ಚಿನ ಮೊತ್ತದ ಪ್ರತಿ ವ್ಯಾಲೆಟ್ ಲೋಡ್ ವಹಿವಾಟಿಗೆ ಸಹ ಎಸ್‌ಬಿಐ ಕಾರ್ಡ್ ವಹಿವಾಟು ಮೊತ್ತದ 1% ಅನ್ನು ಶುಲ್ಕವಾಗಿ ವಿಧಿಸುತ್ತದೆ. ಈ ಶುಲ್ಕವು MCC ಕೋಡ್‌ಗಳು 6540 ಮತ್ತು 6541 ಅಡಿಯಲ್ಲಿ ಗುರುತಿಸಲಾದ ವಹಿವಾಟುಗಳಿಗೆ ಅನ್ವಯಿಸುತ್ತದೆ. ನೆಟ್‌ವರ್ಕ್ ಪಾಲುದಾರರು ಈ MCC ಗಳನ್ನು ವ್ಯಾಖ್ಯಾನಿಸುತ್ತಾರೆ ಮತ್ತು ಅವರ ವಿವೇಚನೆಯ ಮೇರೆಗೆ ಇವು ಬದಲಾಗಬಹುದು ಎಂದು SBI ಕಾರ್ಡ್ ಸ್ಪಷ್ಟಪಡಿಸಿದೆ.

ಇತರ ಪ್ರಮುಖ SBI ಕಾರ್ಡ್ ಶುಲ್ಕಗಳು
(ಪರಿಷ್ಕರಿಸದ ದರಗಳು)

ಶಿಕ್ಷಣ ಪಾವತಿ ಮತ್ತು ವ್ಯಾಲೆಟ್ ಲೋಡ್ ಶುಲ್ಕಗಳ ಹೊರತಾಗಿ, ಈ ಕೆಳಗಿನ ಇತರೆ ಸೇವೆಗಳ ಶುಲ್ಕಗಳು ಮತ್ತು ದಂಡಗಳು ಪರಿಷ್ಕರಿಸಲಾಗಿಲ್ಲ ಮತ್ತು ಹಿಂದಿನಂತೆಯೇ ಮುಂದುವರೆಯುತ್ತವೆ.

ನಗದು ಮುಂಗಡ, ಪಾವತಿ ಮತ್ತು ಕಾರ್ಡ್ ಬದಲಿ ಶುಲ್ಕಗಳು

ಕೌಂಟರ್‌ನಲ್ಲಿ ಮಾಡುವ ನಗದು ಪಾವತಿಗಳಿಗೆ ₹250 ಶುಲ್ಕವಿದೆ, ಮತ್ತು ಚೆಕ್ ಪಾವತಿ ಶುಲ್ಕ ₹200 ಆಗಿದೆ. ಒಂದು ವೇಳೆ ನಿಮ್ಮ ಪಾವತಿಯು ಗೌರವಿಸಲ್ಪಡದಿದ್ದರೆ (ಚೆಕ್ ಬೌನ್ಸ್), ಪಾವತಿ ಗೌರವ ನಷ್ಟ ಶುಲ್ಕವು ಪಾವತಿ ಮೊತ್ತದ 2% ರಷ್ಟಿದ್ದು (ಕನಿಷ್ಠ ₹500). ದೇಶೀಯ ಮತ್ತು ಅಂತರರಾಷ್ಟ್ರೀಯ ATM ಗಳಲ್ಲಿ ನಗದು ಮುಂಗಡ ಶುಲ್ಕವು ವಹಿವಾಟು ಮೊತ್ತದ 2.5% ರಷ್ಟಿದ್ದು (ಕನಿಷ್ಠ ₹500) ನಿಗದಿಪಡಿಸಲಾಗಿದೆ. ಕಾರ್ಡ್ ಬದಲಿ ಶುಲ್ಕ ಸಾಮಾನ್ಯ ಕಾರ್ಡ್‌ಗಳಿಗೆ ₹100 ರಿಂದ ₹250 ವರೆಗೆ ಇರುತ್ತದೆ, ಆದರೆ ಆರಮ್ ಕಾರ್ಡ್‌ಗಳಿಗೆ ₹1,500 ಆಗಿದೆ. ವಿದೇಶದಲ್ಲಿ ತುರ್ತು ಕಾರ್ಡ್ ಬದಲಿ ಅಗತ್ಯವಿದ್ದರೆ, ವಾಸ್ತವಿಕ ವೆಚ್ಚವನ್ನು ವಿಧಿಸಲಾಗುತ್ತದೆ (ವೀಸಾಗೆ ಕನಿಷ್ಠ $175 ಮತ್ತು ಮಾಸ್ಟರ್‌ಕಾರ್ಡ್‌ಗೆ $148).

ವಿಳಂಬ ಪಾವತಿ ಶುಲ್ಕಗಳ ವಿವರ

ನಿಗದಿತ ದಿನಾಂಕದೊಳಗೆ ಕನಿಷ್ಠ ಬಾಕಿ ಮೊತ್ತ (MAD) ಪಾವತಿಸದಿದ್ದರೆ ಈ ಕೆಳಗಿನ ವಿಳಂಬ ಶುಲ್ಕಗಳು ಅನ್ವಯಿಸುತ್ತವೆ: ₹0 - ₹500 ಬಾಕಿ ಮೊತ್ತಕ್ಕೆ ಶುಲ್ಕವಿಲ್ಲ. ಬಾಕಿ ಮೊತ್ತ > ₹500 ರಿಂದ ₹1,000 ವರೆಗೆ ₹400; > ₹1,000 ರಿಂದ ₹10,000 ವರೆಗೆ ₹750; > ₹10,000 ರಿಂದ ₹25,000 ವರೆಗೆ ₹950; > ₹25,000 ರಿಂದ ₹50,000 ವರೆಗೆ ₹1,100; ಮತ್ತು ₹50,000 ಕ್ಕಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ ₹1,300 ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ, ಸತತ ಎರಡು ಬಿಲ್ಲಿಂಗ್ ಚಕ್ರಗಳಿಗೆ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸದಿದ್ದರೆ ₹100 ಹೆಚ್ಚುವರಿ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತದೆ, ಇದು MAD ಸಂಪೂರ್ಣವಾಗಿ ಕ್ಲಿಯರ್ ಆಗುವವರೆಗೆ ಪ್ರತಿ ಪಾವತಿ ಚಕ್ರಕ್ಕೂ ಅನ್ವಯಿಸುತ್ತದೆ.

ನವೆಂಬರ್ 1 ರಿಂದ ಈ ಹೊಸ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಯೋಜಿಸುವುದು ಸೂಕ್ತ.

ರಾಜ್ಯ `ಸರ್ಕಾರಿ ನೌಕರರಿಗೆ' ಗುಡ್ ನ್ಯೂಸ್ : ಇಂದಿನಿಂದ 'ಆರೋಗ್ಯ ಸಂಜೀವಿನಿ ಯೋಜನೆ' ಜಾರಿ | Arogya Sanjeevini

ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸುವ ಸಂಬಂಧ ಮೇಲೆ ಕ್ರ.ಸಂ.(1) ರಿಂದ (6) ರಲ್ಲಿ ಓದಲಾದ ಸರ್ಕಾರದ ಆದೇಶ: ಸುತ್ತೋಲೆಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ.

ಯೋಜನೆಯಡಿ ಸರ್ಕಾರಿ ನೌಕರರ ನೋಂದಾವಣೆ, ಮಾಸಿಕ ವಂತಿಕೆ ಮತ್ತು ಯೋಜನೆಗೆ ಒಳಪಡಲು/ ಒಳಪಡದೇ ಇರಲು, ಆಯ್ಕೆ ವ್ಯಕ್ತಪಡಿಸುವುದು ಮುಂತಾದ ಅಂಶಗಳ ಕುರಿತು ಮೇಲೆ ಓದಲಾದ (6) ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸುವ ಸರ್ಕಾರಿ ನೌಕರರು ಮಾಸಿಕ ವಂತಿಕೆಯನ್ನು ಯಾವ ಲೆಕ್ಕ ಶೀರ್ಷಿಕೆಯಡಿ ಪಾವತಿಸಬೇಕು ಹಾಗೂ ಇತರೆ ವಿಧಿ-ವಿಧಾನಗಳ ಬಗ್ಗೆ ಮಾರ್ಗಸೂಚಿಗಳನ್ನು (SOP) ನೀಡಲಾಗುವುದೆಂದು ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸದರಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತಷ್ಟು ಪರಿಷ್ಕೃತ ಸೂಚನೆಗಳನ್ನು ನೀಡಿ ಅಕ್ಟೋಬರ್ 01, 2025 ರಿಂದ ಜಾರಿಗೆ ತರುವುದು ಅವಶ್ಯವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ, 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯು (KASS) ಅಕ್ಟೋಬರ್ 01, 2025 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಯೋಜನೆಗೆ ಸರ್ಕಾರಿ ನೌಕರರ ಮಾಸಿಕ ವಂತಿಕೆಯನ್ನು ಪಾವತಿಸುವ ಬಗ್ಗೆ:

ಮಾಸಿಕವಂತಿಕೆಯನ್ನು ಪಾವತಿಸುವ ವಿಧಾನ: ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2 ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID) ಗೆ ಜಮಾ ಮಾಡತಕ್ಕದ್ದು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ HRMS ಮುಖಾಂತರ ತಿಳಿಸಲಾಗುವುದು).

ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪಾವತಿಸುವ ಬಗ್ಗೆ: ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಒ ರವರಿಗೆ ಮಾಹಿತಿ ನೀಡುವುದು.

HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ರಾಜ್ಯ ಸರ್ಕಾರಿ ನೌಕರರ ವಂತಿಕೆ ಕಟಾವಣೆ: ಅಂತಹ ನಿಯೋಜಿತ ನೌಕರರ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದು.

ವಂತಿಕೆ ಕಟಾವಣೆ ಪ್ರಾರಂಭಿಸುವುದು: ಯೋಜನೆಗೆ ಮಾಸಿಕ ವಂತಿಕೆಯನ್ನು ಮೇ 2025 ರಿಂದ ಸ್ವಯಂಚಾಲಿತವಾಗಿ ಕಟಾಯಿಸಲಾಗುವುದೆಂದು ಮೇಲೆ ಓದಲಾದ (6)ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಅಂಶವನ್ನು ಮಾರ್ಪಡಿಸಿ ವಂತಿಕೆಯನ್ನು ಅಕ್ಟೋಬ‌ರ್ 2025ರ ವೇತನದಿಂದ ಮುಂದಿನಂತೆ ಕಟಾಯಿಸುವುದು.

ಯೋಜನೆಯ ಉದ್ದೇಶಕ್ಕಾಗಿ ಸರ್ಕಾರಿ ನೌಕರನ "ಕುಟುಂಬ" ವ್ಯಾಪ್ತಿಗೆ ಒಳಪಡುವ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿ ಪರಿಷ್ಕರಣೆ: ಮೇಲೆ ಓದಲಾದ (5)ರ ದಿನಾಂಕ:02.04.205 ರ ಸರ್ಕಾರದ ಆದೇಶದಲ್ಲಿ "ಕುಟುಂಬ" ಪದವನ್ನು ಮರುವ್ಯಾಖ್ಯಾನಿಸಲಾಗಿದ್ದು, ಅದರಲ್ಲಿ ಸರ್ಕಾರಿ ನೌಕರನ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿಯನ್ನು ಮಾಸಿಕ ರೂ. 17,000/- ಕ್ಕೆ ನಿಗದಿಪಡಿಸಲಾಗಿದ್ದು, ಈ ಆದಾಯ ಮಿತಿಯನ್ನು ಪರಿಷ್ಕರಿಸಿ ಮಾಸಿಕ ರೂ. 27,000/- ಗಳಿಗೆ ನಿಗದಿಪಡಿಸಲಾಗಿದೆ. (ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಯವರಿಗೆ ಕೂಡ ಮೇಲಿನ ಆದಾಯ ಮಿತಿ ಹಾಗೂ ವಾಸ್ತವ್ಯದ ಷರತ್ತುಗಳು ಅನ್ವಯಿಸುತ್ತದೆ).

ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು ಅಭಿಮತ ವ್ಯಕ್ತಪಡಿಸುವುದು: ನೌಕರರು ಈ ಯೋಜನೆಗೆ ಒಳಪಡಲು ಅಥವಾ ಒಳಪಡದೆ ಇರಲು (Opt-in, Opt-Out) ಇಚ್ಛಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಮೇಲೆ ಓದಲಾದ (6) ರಲ್ಲಿನ ದಿನಾಂಕ: 19.04.2025 ರ ಸುತ್ತೋಲೆಯ ಅನುಬಂಧ-1 ಹಾಗೂ ಅನುಬಂಧ-2 ರಲ್ಲಿ ನಿಗದಿಪಡಿಸಿರುವ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓಗಳಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿತ್ತು. ಆದರೆ ನೌಕರರ ಕೋರಿಕೆಯನ್ನು ಗಮನಿಸಿ, ಈ ಸೂಚನೆಗಳನ್ನು ಭಾಗಶ: ಪರಿಷ್ಕರಿಸಿ- ಯೋಜನೆಗೆ ಒಳಪಡಲು ಅಥವಾ ಒಳಪಡದೆ ಇರಲು (Opt-in, Opt-Out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿಡಿಒಗಳಿಗೆ ಸಲ್ಲಿಸಲು 18 ಅಕ್ಟೋಬರ್, 2025 ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಆದರೆ ಈ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS)ಯ ವ್ಯಾಪ್ತಿ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ಗಳಡಿ ಈ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ರೂಪಿಸಿರುವ ಯೋಜನೆಯಾಗಿದೆ. ಈ ಸಂಬಂಧ ಮೇಲೆ ಓದಲಾದ ಕ್ರಮ ಸಂಖ್ಯೆ (2) ಹಾಗೂ (3) ದಿನಾಂಕ: 05.09.2022 ಹಾಗೂ ದಿನಾಂಕ 09.03.2023 ರ ಸರ್ಕಾರದ ಆದೇಶಗಳಲ್ಲಿ ಸ್ಪಷ್ಟಿಕರಣಗಳನ್ನು ನೀಡಲಾಗಿದೆ.

kgid bonus

ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ಮೇಲೆ ಓದಲಾದ ಪತ್ರದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇಕಾಗಿದ್ದು, ಅದರನ್ವಯ 2020-2022ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸದ್ದು, ವಿಮಾ ಗಣಕಕಾರರು 2020-2022ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಈ ಕೆಳಕಂಡಂತೆ ಮೌಲ್ಯಮಾಪನ ವರದಿ ನೀಡಿರುತ್ತಾರೆ.

ವಿಮಾ ಗಣಕರು ತಮ್ಮ ವರದಿಯಲ್ಲಿ ದಿನಾಂಕ:31.03.2022 ರಂದು ಚಾಲ್ತಿಯಲ್ಲಿರುವ ಎಲ್ಲಾ ಪಾಲಿಸಿಗಳಿಗೆ 'ಪ್ರತಿ ಸಾವಿರ ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ ರೂ.80/- ರಂತೆ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆಯಾಗಿ ಹೆಚ್ಚಳವಾಗಿರುವ ರೂ. 2524.53 ಕೋಟಿಗಳಲ್ಲಿ ರೂ.1955.95 ಕೋಟಿಗಳನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.568.57 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ.ಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸ್ಸು ಮಾಡಿರುತ್ತಾರೆ.

ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ವಿಮಾ ಗಣಕರು ಮೌಲ್ಯಮಾಪನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ, ದಿನಾಂಕ: 31.03.2022 ರಂದು ಚಾಲ್ತಿಯಲ್ಲಿದ್ದ ಪಾಲಿಸಿಗಳ ಮೇಲೆ ವಿಮಾ ಮೊತ್ತದ ಪ್ರತಿ ರೂ. 1000 ಗಳಿಗೆ ವಾರ್ಷಿಕವಾಗಿ ರೂ.80/- ರ ದರದಲ್ಲಿ ಬೋನಸ್ ನೀಡುವುದರ ಜೊತೆಗೆ ದಿನಾಂಕ:01.04.2022 ರಿಂದ 31.03.2024ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ಎಲ್ಲಾ ವಿಮಾ ತ್ಯಾಗ ಮೌಲ್ಯಗಳಿಂದ ಹೊರಹೋಗಿರುವ ಪಾಲಿಸಿಗಳಿಗೆ ಮುಂದಿನ ಮೌಲ್ಯಮಾಪನ ಅವಧಿಯವರೆಗೆ ಪ್ರತಿ ರೂ.1000/- ಗಳಿಗೆ ವಾರ್ಷಿಕವಾಗಿ ರೂ.80/- ಗಳ ಮಧ್ಯಂತರ ಅಧಿಲಾಭಾಂಶವನ್ನು ನೀಡಲು ಸರ್ಕಾರದ ಅನುಮೋದನೆಯನ್ನು ಕೋರಿರುವ ಪ್ರಸ್ತಾವನೆಯನ್ನು ವಿವರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 79 ಕವಿಇ 2025, ಬೆಂಗಳೂರು, ದಿನಾಂಕ: 17 ನೇ ಸೆಪ್ಟೆಂಬರ್ 2025.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ನಿರ್ವಹಿಸುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ, 2020-2022 ರ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯನ್ನು ಆಧರಿಸಿ ಈ ಕೆಳಕಂಡಂತೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡಿದೆ.

(i) 01.04.2020 80 31.03.2022 ថ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ಲಾಭಾಂಶ(Bonus) ನೀಡುವುದು.

(ii) ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ:01.04.2022 ರಿಂದ 31.03.2024 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/-ರಂತೆ ನೀಡುವುದು. ಮಧ್ಯಂತರ ಲಾಭಾಂಶವನ್ನು (Interim Bonus) ನೀಡುವುದು.

Wednesday, May 21, 2025

Home


ಫಲಾನುಭವಿಗಳಾಗಲು ವಸತಿ ರಹಿತರಾಗಿರಬೇಕು. ಬಳ್ಳಾರಿ ನಗರದ ನಿವಾಸಿಗಳಾಗಿರಬೇಕು. ವಾರ್ಷಿಕ ಆದಾಯ ರೂ.3 ಲಕ್ಷ ಮೀರಿರಬಾರದು. ಫಲಾನುಭವಿ ವಂತಿಕೆ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಬದ್ದರಾಗಿರಬೇಕು.

*ಫಲಾನುಭವಿಯು ಭರಿಸಬೇಕಾದ ವಂತಿಕೆ ಮೊತ್ತದ ವಿವರ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-3,30,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-42,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ.

ಅಲ್ಪ ಸಂಖ್ಯಾತ ಮತ್ತು ಇತರೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-2,70,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-1,02,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ. ಪಾವತಿಸಬೇಕು.

ಈ ಮೇಲ್ಕಂಡ ಅರ್ಹತೆಯ ಮಾನದಂಡ ಹಾಗೂ ಫಲಾನುಭವಿ ವಂತಿಕೆ ಪಾವತಿಸಲು ಶಕ್ತರಾಗಿರುವ ಹಾಗೂ ಆಸಕ್ತಿ ಹೊಂದಿರುವ ಕುಟುಂಬಗಳು ಕೂಡಲೇ ನಿಗಧಿತ ನಮೂನೆಯ ಅರ್ಜಿ ಪಡೆದು ಅವಶ್ಯಕ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಹಳೆಯ ಕಚೇರಿಯ ಆಶ್ರಯ ಶಾಖೆಗೆ ಭೇಟಿ ನೀಡಬಹುದು ಎಂದು ಮಹಾನಗರ ಪಾಲಿಕೆ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

Tuesday, January 7, 2025

information

*ಮಾಹಿತಿಗಾಗಿ*

*ಈ ವರ್ಷದ ತೆರಿಗೆ ( ಟ್ಯಾಕ್ಸ್) ವಿಚಾರವಾಗಿ ನೀವು ತಿಳಿದುಕೊಂಡಿರಬೇಕಾದ ಕೆಲವು  ಅಂಶಗಳು : -*

*ಈವರ್ಷ ಸುಮಾರು ಶೇ 95%* ಜನ ಶಿಕ್ಷಕರು ತೆರಿಗೆಗೆ ಒಳಪಡುತ್ತಾರೆ.*. ಏಕೆಂದರೆ ನಾವು ಎಲ್ಲರೂ 7ನೇ ವೇತನ ಪಡಿಯುತ್ತಿದ್ದು ಅದರ ಜೊತೆಗೆ ವಾರ್ಷಿಕ ಬಡ್ತಿ.ಕಾಲಮಿತಿ ಬಡ್ತಿ.  ಪಡೆದಿರುವುದರಿಂದ ತೆರಿಗೆಯನ್ನು ಭರಿಸಬೇಕಾಗುವದು*


*ಕಳೆದ  ವರ್ಷದ ಹಾಗೆ ಈ ವರ್ಷವೂ ಸಹ ಎರಡು ರೀತಿಯ ತೆರಿಗೆ ಲೆಕ್ಕಾಚಾರವಿದೆ.(Old regime.New regime)*


*New Tax Regime* 

*👉ಹೊಸ ತೆರಿಗೆಯಲ್ಲಿ ಯಾವದೇ ಉಳಿತಾಯ ಮಾಡಲು ಬರುವುದಿಲ್ಲ.*

*👉ಒಟ್ಟು ವೇತನ 7 ಲಕ್ಷ ಮತ್ತು 75000 Standard deduction=775000 ರೂ ಆದಾಯ  ಇದ್ದರೆ ತೆರಿಗೆ ಬರುವುದಿಲ್ಲ.*

*👉7.75000 ಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ*

*👉೦-3 ಲಕ್ಷಕ್ಕೆ ತೆರಿಗೆ ಇಲ್ಲ*

*👉3-7 ಲಕ್ಷಕ್ಕೆ 5%. ಅಂದರೆ 20000 ರೂ.ತೆರಿಗೆ ಭರಿಸಬೇಕು.*

*👉7-10 ಲಕ್ಷಕ್ಕೆ 20000+10% (30000) =50000.ರೂ ತೆರಿಗೆ ಭರಿಸಬೇಕು*

 *👉ತೆರಿಗೆ.10-12 ಲಕ್ಷಕ್ಕೆ 50000+ 15% ತೆರಿಗೆ (30000) = 80000 ರೂ ತೆರಿಗೆ ಭರಿಸಬೇಕು.*

*👉12-  15ಲಕ್ಷಕ್ಕೆ 80000ರೂ +20% ತೆರಿಗೆ (60000)  =140000 ರೂ ತೆರಿಗೆ ಭರಿಸಬೇಕು*


*Old Tax Regi‍me*

*🙏ಶಿಕ್ಷಕ ಬಂಧುಗಳ ಆದಾಯ ತೆರಿಗೆ ಲೆಕ್ಕಾಚಾರ ಸರಳಗೊಳಿಸಲು ಸೂಚನೆಗಳು:🙏*


* *ಇದರಲ್ಲಿ 5 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ಬರುವದಿಲ್ಲ.*

* *5-1೦ ಲಕ್ಷ ವರೆಗಿನ ಅದಾಯಕ್ಕೆ 125೦೦+20%(100000)= 112500 ತೆರಿಗೆ ಭರಿಸಬೇಕು*

* *1೦ ಲಕ್ಷ  ಮೇಲ್ಪಟ್ಟ ಆದಾಯಕ್ಕೆ 112500+3೦% ರಷ್ಟು ಕಟ್ಟಬೇಕಾಗುವದು.*

 *ಹಳೆ ಪದ್ದತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನಂತಿವೆ*

* *80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)*
* 1) ಮಕ್ಕಳ ಟ್ಯೂಷನ್ ಫೀ ರಸೀದಿ
* 2) PLI ತುಂಬಿದ ದಾಖಲೆ
* 3) ಕೈಯಿಂದ ತುಂಬುವ      LIC ಕಂತು
* 4) NSC
* 5) ಸುಕನ್ಯಾ ಸಮೃದ್ಧಿ
* 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು
•   7) ಇತರೆ

* *80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು*

* *ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.*

* *80 D:- ಆರೋಗ್ಯ ವಿಮೆ ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.,*

* *80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.*

* *80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ  ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆ ಗೆ ಮಾತ್ರ*

* (i)   Neurological Diseases where the disability level has been certified to be of 40% and above,—
* (a)   Dementia ;
* (b)   Dystonia Musculorum Deformans ;
* (c)   Motor Neuron Disease ;
* (d)   Ataxia ;
* (e)   Chorea ;
* (f)   Hemiballismus ;
* (g)   Aphasia ;
* (h)   Parkinsons Disease ;
* (ii)   Malignant Cancers ;
* (iii)   Full Blown Acquired Immuno-Deficiency Syndrome (AIDS) ;
* (iv)   Chronic Renal failure ;
* (v)   Hematological disorders :
* (i)   Hemophilia ;
* (ii)   Thalassaemia.

* *80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.*

* *80 E:- ಶಿಕ್ಷಣ ಸಾಲದ ಬಡ್ಡಿ ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.* 

* *80 G:- ದೇಣಿಗೆ/ದಾನ ಕ್ಕೆ ವಿನಾಯಿತಿ. ಆದಾಯ  ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ.*
* *ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*
* *ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*  
*   *ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ** 
*  *80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ.*

* *HRA ಮನೆ ಬಾಡಿಗೆ ತೆಗೆದುಕೊಳ್ಳಬಹುದು.ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುವು ದಿಲ್ಲ.*

10 ನೇ ತರಗತಿ ಪಾಸ್‌ ಆಗಿದ್ರೆ ಸಾಕು, ರೈಲ್ವೆಯಲ್ಲಿ ವಿವಿಧ ವಿಭಾಗಗಳಲ್ಲಿ 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ..! ಎಕ್ಸಾಂ ಇಲ್ಲ

10 ನೇ ತರಗತಿ ಪಾಸ್‌ ಆಗಿದ್ರೆ ಸಾಕು, ರೈಲ್ವೆಯಲ್ಲಿ ವಿವಿಧ ವಿಭಾಗಗಳಲ್ಲಿ 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ..! ಎಕ್ಸಾಂ ಇಲ್ಲ

ಹುದ್ದೆಯ ವಿವರಗಳು


ಎಲೆಕ್ಟ್ರಾನಿಕ್

ಮೆಕ್ಯಾನಿಕ್


ಎಲೆಕ್ಟ್ರಿಷಿಯನ್


ಫಿಟ್ಟರ್ ಪೇಂಟರ್


ವೆಲ್ಡರ್, ಇತರೆ


ಅರ್ಹತಾ ಮಾನದಂಡಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಇದರೊಂದಿಗೆ ಅರ್ಜಿದಾರರು ಡಿಸೆಂಬರ್ 28, 2024 ರಂತೆ 15 ಮತ್ತು 24 ವರ್ಷಗಳ ನಡುವೆ ಇರಬೇಕು. ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆಗಳು ಅನ್ವಯಿಸುತ್ತವೆ.


ಆಯ್ಕೆ ಪ್ರಕ್ರಿಯೆಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಮೆರಿಟ್ ಪಟ್ಟಿಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

ಸಂಬಳ ಎಷ್ಟು..?ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ 7,700 ರಿಂದ ರೂ 20,200 ರವರೆಗಿನ ಮಾಸಿಕ ಸ್ಟೈಫಂಡ್ ಅನ್ನು ಪಡೆಯಲಿದ್ದಾರೆ. ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ 100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಎಸ್‌ ಸಿ/ ಎಸ್‌ಟಿ /ಪಿಹೆಚ್‌ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.


ಅಗತ್ಯ ದಾಖಲೆಗಳು


ಆಧಾರ್ ಕಾರ್ಡ್ 10 ನೇ ತರಗತಿಯ ಅಂಕಪಟ್ಟಿ ಐಟಿಐ ಡಿಪ್ಲೊಮಾ ಪಾಸ್‌ಪೋರ್ಟ್ ಗಾತ್ರದ ಫೋಟೋ


ಅರ್ಜಿ ಸಲ್ಲಿಸಲು ಕ್ರಮಗಳುಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.scr.indianrailways.gov.in.


ಹಂತ 2: ಇಲ್ಲಿ “ಹೊಸ ನೋಂದಣಿ” ಲಿಂಕ್ ಅನ್ನು ಕ್ಲಿಕ್ ಮಾಡಿ.


ಹಂತ 3: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.


ಹಂತ 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.


ಹಂತ 5: ಭವಿಷ್ಯದ ಉಲ್ಲೇಖಕ್ಕಾಗಿ ಅಂತಿಮ ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.


ಎಎಸ್‌ಸಿಆರ್‌ ಬಗ್ಗೆ ಮಾಹಿತಿದಕ್ಷಿಣ ಮಧ್ಯ ರೈಲ್ವೆ (SCR) ಭಾರತೀಯ ರೈಲ್ವೆಯ ಒಂದು ವಿಭಾಗವಾಗಿದ್ದು, ಭಾರತದ ದಕ್ಷಿಣ ಭಾಗದಲ್ಲಿ ರೈಲುಗಳನ್ನು ನಿರ್ವಹಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರದೇಶಗಳನ್ನು ಒಳಗೊಂಡಿದೆ.


ಸುಗಮ ರೈಲ್ವೆ ಕಾರ್ಯಾಚರಣೆಗಳನ್ನು ಖಾತ್ರಿಪಡಿಸುವಲ್ಲಿ ಎಸ್‌ ಸಿಆರ್‌ ಪ್ರಮುಖ ಪಾತ್ರವನ್ನುವಹಿಸುತ್ತದೆ, ಪ್ರಯಾಣಿಕರ ಸೇವೆಗಳು, ಸರಕು ಸಾಗಣೆ ಮತ್ತು ಹೆಚ್ಚಿನದನ್ನು ನೀಡುತ್ತದೆ. ವಿಭಾಗವು ಸಿಕಂದರಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಸಾರ್ವಜನಿಕರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.