Health is wealth in hostel life
Followers
Followers somaling m uppar
Tuesday, January 7, 2025
information
10 ನೇ ತರಗತಿ ಪಾಸ್ ಆಗಿದ್ರೆ ಸಾಕು, ರೈಲ್ವೆಯಲ್ಲಿ ವಿವಿಧ ವಿಭಾಗಗಳಲ್ಲಿ 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ..! ಎಕ್ಸಾಂ ಇಲ್ಲ
10 ನೇ ತರಗತಿ ಪಾಸ್ ಆಗಿದ್ರೆ ಸಾಕು, ರೈಲ್ವೆಯಲ್ಲಿ ವಿವಿಧ ವಿಭಾಗಗಳಲ್ಲಿ 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ..! ಎಕ್ಸಾಂ ಇಲ್ಲ
ಹುದ್ದೆಯ ವಿವರಗಳು
ಎಲೆಕ್ಟ್ರಾನಿಕ್
ಮೆಕ್ಯಾನಿಕ್
ಎಲೆಕ್ಟ್ರಿಷಿಯನ್
ಫಿಟ್ಟರ್ ಪೇಂಟರ್
ವೆಲ್ಡರ್, ಇತರೆ
ಅರ್ಹತಾ ಮಾನದಂಡಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಇದರೊಂದಿಗೆ ಅರ್ಜಿದಾರರು ಡಿಸೆಂಬರ್ 28, 2024 ರಂತೆ 15 ಮತ್ತು 24 ವರ್ಷಗಳ ನಡುವೆ ಇರಬೇಕು. ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆಗಳು ಅನ್ವಯಿಸುತ್ತವೆ.
ಆಯ್ಕೆ ಪ್ರಕ್ರಿಯೆಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ಮೆರಿಟ್ ಪಟ್ಟಿಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.
ಸಂಬಳ ಎಷ್ಟು..?ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ 7,700 ರಿಂದ ರೂ 20,200 ರವರೆಗಿನ ಮಾಸಿಕ ಸ್ಟೈಫಂಡ್ ಅನ್ನು ಪಡೆಯಲಿದ್ದಾರೆ. ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಎಸ್ ಸಿ/ ಎಸ್ಟಿ /ಪಿಹೆಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ 10 ನೇ ತರಗತಿಯ ಅಂಕಪಟ್ಟಿ ಐಟಿಐ ಡಿಪ್ಲೊಮಾ ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸಲು ಕ್ರಮಗಳುಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: www.scr.indianrailways.gov.in.
ಹಂತ 2: ಇಲ್ಲಿ “ಹೊಸ ನೋಂದಣಿ” ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 5: ಭವಿಷ್ಯದ ಉಲ್ಲೇಖಕ್ಕಾಗಿ ಅಂತಿಮ ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.
ಎಎಸ್ಸಿಆರ್ ಬಗ್ಗೆ ಮಾಹಿತಿದಕ್ಷಿಣ ಮಧ್ಯ ರೈಲ್ವೆ (SCR) ಭಾರತೀಯ ರೈಲ್ವೆಯ ಒಂದು ವಿಭಾಗವಾಗಿದ್ದು, ಭಾರತದ ದಕ್ಷಿಣ ಭಾಗದಲ್ಲಿ ರೈಲುಗಳನ್ನು ನಿರ್ವಹಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಪ್ರದೇಶಗಳನ್ನು ಒಳಗೊಂಡಿದೆ.
ಸುಗಮ ರೈಲ್ವೆ ಕಾರ್ಯಾಚರಣೆಗಳನ್ನು ಖಾತ್ರಿಪಡಿಸುವಲ್ಲಿ ಎಸ್ ಸಿಆರ್ ಪ್ರಮುಖ ಪಾತ್ರವನ್ನುವಹಿಸುತ್ತದೆ, ಪ್ರಯಾಣಿಕರ ಸೇವೆಗಳು, ಸರಕು ಸಾಗಣೆ ಮತ್ತು ಹೆಚ್ಚಿನದನ್ನು ನೀಡುತ್ತದೆ. ವಿಭಾಗವು ಸಿಕಂದರಾಬಾದ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಸಾರ್ವಜನಿಕರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
Government Employees: ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
Government Employees: ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ ಮತ್ತು ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಹರಾಗಿರುತ್ತಾರೆ
ಸರ್ಕಾರಿ ನೌಕರರ ಕುಟುಂಬದಲ್ಲಿ ಯಾರು ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಹರು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ, ಸರ್ಕಾರಿ ನೌಕರರ ಪತಿ ಅಥವಾ ಪತ್ನಿ. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ) ಅರ್ಹರಾಗಿರುತ್ತಾರೆ.
ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ. ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯಲ್ಲಿನ 'ಆರೋಗ್ಯ ಭಾಗ್ಯ' ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.
ರಾಜ್ಯ ಸೇವೆಯಲ್ಲಿ ನಿಯೋಜನೆ/ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ (Establishment in public sector) ನೌಕರರು ಈ ಯೋಜನೆಗೆ ಒಳಪಡುವುದಿಲ್ಲ. ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ "ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟಪಡಿಸಲಾದ ಸ್ಥಾಪನೆಗಳ ನೌಕರರು".
ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.ನ್ಯಾಯಾಂಗ ಸೇವೆಯ ಅಧಿಕಾರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಲಯದ ನೌಕರರು ಈ ಯೋಜನೆ ಒಳಪಡುವುದಿಲ್ಲ. ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು ಹಾಗೂ ರಾಜ್ಯ ವಿಧಾನಮಂಡಲದ ನೌಕರರಿಗೆ ಅನ್ವಯಿಸುವುದಿಲ್ಲ.
* KASS ಅಡಿಯಲ್ಲಿ "ಕುಟುಂಬ" ಪದದ ವ್ಯಾಖ್ಯಾನವೇನು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" ಎಂದರೆ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು (ದತ್ತು ಪಡದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಎಂದು ವ್ಯಾಖ್ಯಾನಿಸಲಾಗಿದೆ.
* ಸರ್ಕಾರಿ ನೌಕರನು ವೃತ್ತಿಪರ (Probationary period) ಅವಧಿಯಲ್ಲಿದ್ದರೆ KASS ಯೋಜನೆಗೆ ಫಲಾನುಭವಿ ಆಗಬಹುದೇ?
ಹೌದು. ವೃತ್ತಿಪರ (Probationary period) ಅವಧಿಯಲ್ಲಿರುವ ಸರ್ಕಾರಿ ನೌಕರನು KASS ಯೋಜನೆಗೆ ಅರ್ಹನಾಗಿರುತ್ತಾನೆ.
* ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಇಬ್ಬರೂ ವಂತಿಗೆಯನ್ನು ಸಲ್ಲಿಸಬೇಕಾ?
ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಹೆಚ್ಚಿನ ಮೂಲ ವೇತನವನ್ನು ಪಡೆಯುವ ಉದ್ಯೋಗಿ ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳುತ್ತಾರೆ. ಆದರೆ ಇಬ್ಬರೂ ಉದ್ಯೋಗಿಗಳು ತಮ್ಮ ಪೋಷಕರನ್ನು ಅವಲಂಬಿತರನ್ನಾಗಿ ಸೇರಿಸಲು ಬಯಸಿದರೆ, ಇಬ್ಬರೂ ಪ್ರತ್ಯೇಕವಾಗಿ ಯೋಜನೆಗೆ ನೋಂದಾಯಿಸಿಕೊಳ್ಳತಕ್ಕದ್ದು.
* ಮಲಮಕ್ಕಳಿಗೆ KASS ಸೌಲಭ್ಯಗಳನ್ನು ಅನುಮತಿಸಲಾಗಿದೆಯೇ?
ಹೌದು,
* KASS ಸೌಲಭ್ಯಗಳಿಗಾಗಿ ಕುಟುಂಬದ ಸದಸ್ಯರ ಅಡಿಯಲ್ಲಿ ಅವಲಂಬಿತ ಅತ್ತೆಯನ್ನು ಸೇರಿಸಬಹುದೇ?
ಒಬ್ಬ ಮಹಿಳಾ ಸರ್ಕಾರಿ ನೌಕರನು ತನ್ನ ತಂದೆ-ತಾಯಿಯನ್ನು ಅಥವಾ ಅತ್ತೆ-ಮಾವರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದು, ಕೆ.ಎ.ಎಸ್.ಎಸ್ ಅಡಿಯಲ್ಲಿ KASS ನಿಯಮದಂತೆ ಸರ್ಕಾರಿ ನೌಕರರನೊಂದಿಗೆ ವಾಸವಾಗಿದ್ದು ಕನಿಷ್ಠ ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
* KASS ಯೋಜನೆಯಲ್ಲಿ ಅವಲಂಬಿತರಾಗಿರುವ ಪುತ್ರರು / ಹೆಣ್ಣುಮಕ್ಕಳಿಗೆ ಯಾವುದೇ ವಯಸ್ಸಿನ ಮಿತಿ ಇದೆಯೇ?
ಹೆಣ್ಣು ಅಥವಾ ಗಂಡು ಮಕ್ಕಳು ಗಳಿಸಲು ಪ್ರಾರಂಭಿಸುವವರೆಗೆ (ಉದ್ಯೋಗ) ಅಥವಾ 30ವರ್ಷ ವಯಸ್ಸನ್ನು ತಲುಪುವವರೆಗೆ ಅಥವಾ ಮದುವೆಯಾಗುವವರೆಗೆ ಅರ್ಹನಾಗಿರುತ್ತಾರೆ. ಆದಾಗ್ಯೂ ಮಕ್ಕಳು ಯಾವುದೇ ರೀತಿಯ (ದೈಹಿಕ ಅಥವಾ ಮಾನಸಿಕ) ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಅವರು KASS ಪ್ರಯೋಜನಗಳಿಗೆ ಅರ್ಹನಾಗಿರುತ್ತಾರೆ.
* KASS ನೊಂದಾಯಿತ (Empaneled) ಆಸ್ಪತ್ರೆಗಳಲ್ಲಿ ಅನುಮೋದಿಸಲಾದ ವಾರ್ಡ್ ಅರ್ಹತೆಯ ಮಾನದಂಡಗಳು ಯಾವುವು?
Group A & B - "Private Ward"
Group C - "Semi Private Ward"
Group D - "General Ward"
* ಫಲಾನುಭವಿಯು ನಿಗದಿಪಡಿಸಿರುವ ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್ ಪಡೆಯಲು (Ward Up gradation) ಯೋಜನೆಯಲ್ಲಿ ಅವಕಾಶವಿದೆಯೇ?
ಇಲ್ಲ, ವಾರ್ಡ್ ಮಾನದಂಡಕ್ಕಿಂತ ಉನ್ನತ ಮಟ್ಟದ (Ward Up gradation) ಪಡೆಯಲು ಫಲಾನುಭವಿಯು ವ್ಯತ್ಯಾಸದ ಹಣವನ್ನು ಪಾವತಿಮಾಡಿ ರಶೀದಿಯನ್ನು ಪಡೆಯಬಹುದಾಗಿದೆ.
* ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ಫಲಾನುಭವಿಗೆ ಯಾವ ದಾಖಲೆಯ ಅಗತ್ಯವಿದೆ?
ಫಲಾನುಭವಿಯ ನೊಂದಾಯಿತ ಸಮಯದಲ್ಲಿ ನೀಡುವ ಡಿ.ಡಿ.ಓ ಇ-ಸಹಿ ಹೊಂದಿರುವ ಧೃಡಿಕರಣ ಪತ್ರ ಅಥವಾ KASS ಕಾರ್ಡ್ ಅವಶ್ಯಕತೆ ಇರುತ್ತದೆ.
* ರೆಫರಲ್ ಅಗತ್ಯವಿದೆಯೇ? ರೆಫರಲ್ ಉದ್ದೇಶಕ್ಕಾಗಿ ತಜ್ಞರು ನೋಂದಾಯಿತ (Empaneled) ಮಾಡಲಾದ ಆಸ್ಪತ್ರೆಯ ಹೆಸರನ್ನು ಸೂಚಿಸಬೇಕೇ?
ಸರ್ಕಾರಿ ವೈದ್ಯರಿಂದ ಯಾವುದೇ ನಿರ್ದೇಶನದ (ರೆಫರಲ್) ಅಗತ್ಯವಿಲ್ಲ. ಕೆಲವೊಂದು ಚಿಕಿತ್ಸೆಗೆ (IVF, Replacement, Transplant) ಚಿಕಿತ್ಸೆಗಳಿಗೆ ನಿಗದಿ ಪಡಿಸಿದ ಅನುಮೋದನೆಯೊಂದಿಗೆ ಮಂಜೂರಾತಿ ಕ್ರಮ ಕೈಗೊಳ್ಳಲಾಗುವುದು.
* KASS ನ ಅಡಿಯಲ್ಲಿ ಪಾವತಿಸಲಾಗುವ ಚಿಕಿತ್ಸಾ ವೆಚ್ಚದ ಅರ್ಹತದಾಯಕ ಮೊತ್ತ ಎಷ್ಟು?
CGHS ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆ ಆಧಾರದ ಮಿತಿಯಲ್ಲಿ ಯಾವುದೇ ಹೊರಮಿತಿ ಇಲ್ಲದೆ ಪಾವತಿಸಲಾಗುವುದು.
* KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಎಲ್ಲಿ ಪಡೆಯಬಹುದು?
KASS ಫಲಾನುಭವಿಗಳು ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಎಎಸ್ಎಸ್ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಫಲಾನುಭವಿಗಳು ಸೇವೆ ಪಡೆಯಬಹುದು. ತುರ್ತು ಸಂದರ್ಭದಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಮತ್ತು ನಿಯಮಾನುಸಾರ ಹಿಂಬರಿಸಿಕೊಳ್ಳಲು ಅರ್ಹರಿರುತ್ತಾರೆ.
* ಮೊದಲ ಹಂತದಲ್ಲಿ KASS ನಲ್ಲಿ ನೀಡುವ ಸೌಲಭ್ಯಗಳೇನು?
ಮೊದಲ ಹಂತದಲ್ಲಿ KASS ನ ಅಡಿಯಲ್ಲಿ ಒಳರೋಗಿ ಚಿಕಿತ್ಸೆ, ಹಗಲು ಚಿಕಿತ್ಸಾ ಕೇಂದ್ರ (Day Care), ಕಣ್ಣಿನ ಚಿಕಿತ್ಸಾ ಆಸ್ಪತ್ರೆ ಮತ್ತು ದಂತ ಚಿಕಿತ್ಸಾ ಆಸ್ಪತ್ರೆಗಳು.
* ಮೊದಲ ಹಂತದಲ್ಲಿ KASS ನಡಿಯಲ್ಲಿ ಹೊರ ರೋಗಿ ಚಿಕಿತ್ಸೆಗೆ ಸೌಲಭ್ಯವಿದೆಯೇ?
ಇಲ್ಲ, KASS ಫಲಾನುಭವಿಗಳು ಮುಂದಿನ ಆದೇಶದವರೆಗೆ ಹೋರರೋಗಿ ಚಿಕಿತ್ಸಾ ಸೌಲಭ್ಯವನ್ನು ಹಿಂಬರಿಸಿಕೊಳ್ಳಲು ಅರ್ಹರಾಗಿರುತ್ತಾರೆ.
* KASS ಅಡಿಯಲ್ಲಿ ಲಸಿಕೆಗಳ ಮಾರ್ಗಸೂಚಿಗಳು ಯಾವುವು?
ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಆವರಿಸಿರುವ ಲಸಿಕೆಗಳು ಹಾಗೂ KASS ನಡಿಯಲ್ಲಿ ನಿರ್ಧಿಷ್ಟ ಪಡಿಸಿದ ಲಸಿಕೆಗಳಿಗೆ ಮಾತ್ರ ಅರ್ಹರಿರುತ್ತಾರೆ.
* KASS ಫಲಾನುಭವಿಗಳು KASS ನಿಂದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಎಷ್ಟು ಬಾರಿ ತಜ್ಞರನ್ನು ಸಂಪರ್ಕಿಸಬಹುದು?
ಕೆ.ಎ.ಎಸ್.ಎಸ್ ಫಲಾನುಭವಿಯು ಒಂದೇ ನೋಂದಾಯಿತ ಆಸ್ಪತ್ರೆಗೆ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಭೇಟಿ ನೀಡಬಹುದು. ಪ್ರತಿ ಭೇಟಿಯ ಸಮಯದಲ್ಲಿ ಫಲಾನುಭವಿಯು ಒಂದೇ ಆಸ್ಪತ್ರೆಯಲ್ಲಿ ಮೂರು ವಿಭಿನ್ನ ತಜ್ಞರನ್ನು ಸಂಪರ್ಕಿಸಬಹುದು.
* KASS ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡದ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ತೆಗೆದುಕೊಂಡ ಚಿಕಿತ್ಸೆಯನ್ನು ಹಿಂಬರಿಸಿಕೊಳ್ಳಬಹುದೇ? ಹಾಗಿದ್ದರೆ ಕಾರ್ಯವಿಧಾನ ಏನು?
ಖಾಸಗಿ ನೋಂದಾವಣೆ ಮಾಡದ ಆಸ್ಪತ್ರೆಗಳಿಂದ ಸರ್ಕಾರದ ಆದೇಶದ ಪ್ರಕಾರ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಚಿಕಿತ್ಸೆಯನ್ನು KASS ದರಗಳಲ್ಲಿ ಹಿಂಬರಿಸಿಕೊಳ್ಳಲು KASS ಪರಿಗಣಿಸುತ್ತದೆ. ಹಿಂಬರಿಸಿಕೊಳ್ಳುವಿಕೆಯನ್ನು KASS ಪ್ಯಾಕೇಜ್ ದರ ಅಥವಾ ನಿಜವಾದ ವೆಚ್ಚದಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆಯಾ ಇಲಾಖಾ ಮುಖ್ಯಸ್ಥರಿಂದ ಹಿಂಬರಿಸಿಕೊಳ್ಳುವಿಕೆಗೆ ಅರ್ಹರಿರುತ್ತಾರೆ.
* ಅನುಮೋದಿತ KASS ದರಗಳಿಗಿಂತ ಹೆಚ್ಚಿನ ಮರುಪಾವತಿಯನ್ನು ಪರಿಗಣಿಸಲು ಮಾರ್ಗಸೂಚಿಗಳು ಯಾವುವು?
ವ್ಯಾಖ್ಯಾನಿಸಲಾದ ಮಾನದಂಡಗಳ ಅಡಿಯಲ್ಲಿ ಬರುವ ಮರುಪಾವತಿಯ ವಿನಂತಿಗಳನ್ನು ವೈದ್ಯಕೀಯ ತಜ್ಞರ ಸಮಿತಿಯು ಪರಿಶೀಲಿಸುತ್ತದೆ.
* ನೋಂದಾಯಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಎಲ್ಲಿ ದೂರು ನೀಡಬೇಕು?
ಫಲಾನುಭವಿಯು ನೋಂದಾಯಿತ ಆಸ್ಪತ್ರೆಗಳ ವೈದ್ಯಕೀಯ ನಿರ್ಲಕ್ಷ್ಯದ ಎಲ್ಲಾ ಪುರಾವೆಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಕುಂದುಕೊರತೆಯ ಅಧಿಕಾರಿಗಳಿಗೆ ಅಥವಾ ಸ್ಟೇಟ್ ಮೆಡಿಕಲ್ ಕೌನ್ಸಿಲ್/ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸಂಪರ್ಕಿಸಬಹುದು.
* IVF ಗಾಗಿ ಮಾರ್ಗಸೂಚಿಗಳು ಯಾವುವು?
IVF ಚಿಕಿತ್ಸೆಯನ್ನು ಜಿಲ್ಲಾ ಸರ್ಕಾರಿ ಸ್ತ್ರೀ ರೋಗ ತಜ್ಞರಿಂದ (ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ / ಜಿಲ್ಲಾ ಆಸ್ಪತ್ರೆ) ಅವರ ಶಿಫಾರಸ್ಸಿನ್ನಯ KASS ನಡಿಯಲ್ಲಿ IVF ಚಿಕಿತ್ಸೆಗೆ ಅನುಮತಿಸಲಾಗುವುದು.
* ಆಂಬ್ಯುಲೆನ್ಸ್ ಶುಲ್ಕಗಳನ್ನು ಹಿಂಬರಿಸಿಕೊಳ್ಳಬಹುದೇ?
ಹೌದು. ಆಂಬ್ಯುಲೆನ್ಸ್ ಶುಲ್ಕಗಳು ನಗರದೊಳಗೆ ಹಿಂಬರಿಸಿಕೊಳ್ಳಲ್ಪಡುತ್ತವೆ, ವೈದ್ಯರಿಂದ ಪ್ರಮಾಣಪತ್ರವಿದ್ದರೆ, ಯಾವುದೇ ಇತರ ವಿಧಾನದ ಮೂಲಕ ಸಾಗಿಸುವಿಕೆಯು ರೋಗಿಯ ಜೀವಕ್ಕೆ ಖಂಡಿತವಾಗಿಯೂ ಅಪಾಯವನ್ನುಂಟು ಮಾಡುತ್ತದ ಅಥವಾ ಅವನ/ಅವಳ ಸ್ಥಿತಿಯನ್ನು ತೀವ್ರವಾಗಿ ಉಲ್ಬಣಗೊಳಿಸುತ್ತದೆ.
* ಫಲಾನುಭವಿಯಾಗಿ ನೋಂದಾಯಿಸಲ್ಪಡಲು ಯಾವ ಕ್ರಮ ವಹಿಸಬೇಕು?
ಫಲಾನುಭವಿಯು ಖಡ್ಡಾಯವಾಗಿ HRMS ತಂತ್ರಾಂಶದಲ್ಲಿ ನೋಂದಾಯಿಸಿ, ಬಟವಾಡೆ ಅಧಿಕಾರಿಗಳು ಅನುಮೋದಿಸಬೇಕಾಗಿರುತ್ತದೆ. ನೋಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಖಡ್ಡಾಯವಾಗಿ unique ID ಯುಳ್ಳ DDO E-Sign ಹೊಂದಿರುವ ಪ್ರತಿಯನ್ನು ಪ್ರಸ್ತುತಪಡಿಸಬೇಕಾಗಿರುತ್ತದೆ
* ತುರ್ತು ಸಂಧರ್ಭದಲ್ಲಿ ಯಾವುದೇ ದಾಖಲಾತಿ ಇಲ್ಲದಿದ್ದಲ್ಲಿ ಯಾವ ಕ್ರಮ ವಹಿಸಬೇಕು?
ಸರ್ಕಾರದ ಆದೇಶದ ಪ್ರಕಾರ ತುರ್ತು ಪ್ರಕರಣಗಳಿದ್ದಲ್ಲಿ ಚಿಕಿತ್ಸೆಯನ್ನು ಯಾವುದೇ ದಾಖಲಾತಿ ಇಲ್ಲದೆ ಪಡೆಯಬಹುದಾಗಿದೆ ಆದರೆ 24 ಗಂಟೆಗಳೊಳಗೆ ದಾಖಲಾತಿಗಳನ್ನು ಆಸ್ಪತ್ರೆಗೆ ಪ್ರಸ್ತುತ ಪಡಿಸಬೇಕಾಗಿರುತ್ತದೆ
Saturday, January 4, 2025
puc model question papers
Thursday, January 2, 2025
SSLC Exam model question papers2025
Wednesday, January 1, 2025
ಏಲಕ್ಕಿ ನೀರು
ಏಲಕ್ಕಿ ಒಂದು ವಿಶೇಷವಾದ ಪರಿಮಳ ಹೊಂದಿರುವ ಸಾಂಬಾರ ವಸ್ತು ಆಗಿದೆ ಸಾಮಾನ್ಯವಾಗಿ ಪಾಯಸದಂತಹ ಸ್ವೀಟ್ ತಯಾರಿಕೆಯಲ್ಲಿ ವಿಶೇಷ ಪರಿಮಳಕ್ಕಾಗಿ ಏಲಕ್ಕಿಯನ್ನು ಬಳಸುತ್ತಾರೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸ್ವೀಟ್ ಗಳಿಗೆ ಹಾಕಿದ್ರೆ ಅದಕ್ಕೆ ವಿಶೇಷವಾದ ಟೇಸ್ಟ್ ಬರುತ್ತೆ ಎಂದೇ ಹೇಳಬಹುದು ಆದರೆ ಇವತ್ತು ಸ್ವೀಟ್ ಅಲ್ಲ ಅದರ ಬದಲು ಏಲಕ್ಕಿ ಸೇವನೆಯಿಂದ ಆಗುವ ಬೆನಿಫಿಟ್ ಬಗ್ಗೆ ಇಲ್ಲಿದೆ ಮಾಹಿತಿ.
ಜೀರ್ಣಕ್ರಿಯೆಗೆ ಸಹಾಯಕ
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೆನೆಸಿಟ್ಟ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ ಅಷ್ಟೇ ಅಲ್ಲದೆ ಹೊಟ್ಟೆ ಉಬ್ಬರ ಮಲಬದ್ಧತೆ ಯಾಸಿಡಿಟಿ ಎಂತಹ ಸಮಸ್ಯೆಗಳು ನಿಮ್ಮ ಹತ್ತಿರವು ಸುಳಿಯುವುದಿಲ್ಲ. ರಾತ್ರಿ ಏಲಕ್ಕಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದು ಒಳ್ಳೆಯದು.
ಇದನ್ನು ಡಿಟಾಕ್ಸ್ ಪಾನೀಯವಾಗಿದೆ
ಸಮಯದಲ್ಲಿ ಇರುವ ವಿಷಕಾರಕ ಅಂಶವನ್ನು ತೆಗೆದುಹಾಕಲು ಏಲಕ್ಕಿ ನೀರು ಬಹಳ ಪ್ರಯೋಜನಕಾರಿಯಾಗಿದೆ ಇದು ಮೂತ್ರವರ್ಧಕ ಗುಣವನ್ನು ಹೊಂದಿರುವುದರಿಂದ ದೇಹದಲ್ಲಿ ಇರುವ ವಿಷ ದ್ರವ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ ಹಾಗಾಗಿ ದೇಹ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಬಾಯಿಯ ಕೆಟ್ಟ ವಾಸನೆ ಹೋಗಲಾಡಿಸಲು
ಕೆಲವರಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಇದನ್ನ ಹೋಗಲಾಡಿಸಲು ಒಂದು ಅತ್ಯುತ್ತಮ ಮನೆ ಮದ್ದು ಅಂದರೆ ಅದು ಏಲಕ್ಕಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ಫಂಗಲ್ ಗುಣಲಕ್ಷಣ ಇರುವುದರಿಂದ ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಏಲಕ್ಕಿ ನೀರನ್ನು ಸೇವನೆ ಮಾಡಬಹುದು ಅಥವಾ ಏಲಕ್ಕಿ ಕಾಳುಗಳನ್ನು ಬಾಯಲ್ಲಿ ಇಟ್ಟು ಜಗಿದು ಅದರ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಚರ್ಮದ ಆರೋಗ್ಯಕ್ಕೂ ಒಳ್ಳೆಯದು!
ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಹ ಕಾಂತಿಯನ್ನು ಕಳೆದುಕೊಳ್ಳುತ್ತದೆ ಚರ್ಮ ಸುಕ್ಕುಗಟ್ಟಿದಂತೆ ಆಗುತ್ತದೆ. ಆದರೆ ಉತ್ಕರ್ಷಣ ನಿರೋಧಕ ಅಂಶ ಹೊಂದಿರುವ ಏಲಕ್ಕಿ ನೀರಿನ ಸೇವನೆ ಚರ್ಮವನ್ನು ಪುನಶ್ಚೇತನ ಗೊಳಿಸುತ್ತದೆ ಚರ್ಮಕ್ಕೆ ಹೊಸ ಕಾಂತಿಯನ್ನು ಒದಗಿಸುತ್ತದೆ.
ಮುಟ್ಟಿನ ನೋವಿಗೆ ರಾಮಬಾಣ
ಪ್ರತಿ ಹೆಣ್ಣು ಮಕ್ಕಳು ಪ್ರತಿ ತಿಂಗಳು ಅನುಭವಿಸಲೇಬೇಕಾದ ಪಿರಿಯಡ್ಸ್ ಸಮಸ್ಯೆಯಿಂದ ಸ್ವಲ್ಪಮಟ್ಟಿಗೆ ಆದರೂ ಪರಿಹಾರ ಕಂಡುಕೊಳ್ಳಬೇಕು ಅಂದರೆ ಏಲಕ್ಕಿ ನೀರು ಸೇವನೆ ಒಳ್ಳೆಯದು. ಕೆಲವರಿಗೆ ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ಸೆಳೆತ ಉಂಟಾಗುತ್ತದೆ. ದೇಹದಲ್ಲಿ ನಿ:ಶಕ್ತಿ ಕಾಣಿಸಿಕೊಳ್ಳುತ್ತದೆ ಹಾರ್ಮೋನ್ ಅಸಮತೋಲನದಿಂದ ದೇಹ ಹೆಚ್ಚು ಸುಸ್ತಾದ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಆಂಟಿಸ್ಪಾಸ್ಮೊಡಿಕ್ ಗುಣವಿರುವ ಏಲಕ್ಕಿ ನೀರನ್ನ ಸೇವನೆ ಮಾಡುವುದರಿಂದ ದೇಹ ನಿರಾಳವಾಗುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ಏಲಕ್ಕಿ ನೀರು ಸೇವನೆ ಹೆಚ್ಚಾಗಿ ಮಾಡುವುದು ಒಳ್ಳೆಯದು.
ರಕ್ತದ ಒತ್ತಡ ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡ ಕಾಡುತ್ತಿರುವವರು ಈ ಪಾನೀಯವನ್ನು ಬೆಳಿಗ್ಗೆ ಸೇವನೆ ಮಾಡುವುದು ಬಹಳ ಒಳ್ಳೆಯದು ಏಲಕ್ಕಿ ನೀರನ್ನ ಸೇವನೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ನಿರಂತರವಾಗಿ ಏಳಕ್ಕೆ ನೀರು ಸೇವನೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ನೀವೇ ಕಾಣುತ್ತೀರಿ.
ತೂಕ ಇಳಿಕೆಗೆ ಸಹಾಯಕ
ಇವು ತೂಕ ಇಳಿಕೆಗೆ ಏನೇನೋ ಸರ್ಕಸ್ ಮಾಡುತ್ತಿದ್ದರೆ, ಅಜೀರ್ಣ ಸಮಸ್ಯೆ ಹೋಗಲಾಡಿಸಿ ಸುಲಭವಾಗಿ ಜೀರ್ಣವಾಗುವಂತೆ ಮಾಡಿ ನಿಮ್ಮ ಹೊಟ್ಟೆಯ ಭಾಗದ ಬೊಜ್ಜು ನಿವಾರಣೆಗೂ ಕೂಡ ಸಹಾಯವಾಗಲು ಏಲಕ್ಕಿ ನೀರು ಸೇವನೆ ಬಹಳ ಒಳ್ಳೆಯದು. ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಏಲಕ್ಕಿಯಲ್ಲಿ ಮಿಲಟೋನಿನ್ ಅಂಶವಿದ್ದು ಇದು ದೇಹದ ಕೊಬ್ಬು ಕರಗಿಸುವಿಕೆಗೆ ಸಹಾಯ ಮಾಡುತ್ತದೆ.
ಏಲಕ್ಕಿ ನೀರು ತಯಾರಿಸುವುದು ಹೇಗೆ?
ಕೆಲವು ಏಲಕ್ಕಿ ಬೀಜಗಳನ್ನು ನೀರಿನಲ್ಲಿ ಹಾಕಿ ನೆನೆ ಇಡಬಹುದು ಅಥವಾ ಏಲಕ್ಕಿಯನ್ನು ಜಜ್ಜಿಕೊಂಡು ಅದರ ಬೀಜವನ್ನು ತೆಗೆಯಬೇಕು ಈಗ ಸಿಪ್ಪೆ ಹಾಗೂ ಬೀಜ ಎರಡನ್ನು ಕೂಡ ಒಂದು ಲೋಟ ನೀರಿಗೆ ಹಾಕಿ ರಾತ್ರಿ ಇಡಿ ನೆನೆ ಇಡಬೇಕು. ಅಥವಾ ಏಲಕ್ಕಿ ಬೀಜವನ್ನು ಮಾತ್ರ ನೀರಿಗೆ ಹಾಕಲು ಬಹುದು. ಈ ರೀತಿ ನೆನೆ ಇಟ್ಟು ನೀರನ್ನು ಪ್ರತಿದಿನ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದರ ಜೊತೆಗೆ ನೀವು ಆರೋಗ್ಯಕರ ಜೀವನವನ್ನು ರೂಡಿಸಿಕೊಳ್ಳುತ್ತಾ ಬಂದರೆ ಖಂಡಿತವಾಗಿಯೂ ತೂಕ ಹೇಳಿಕೆ ಮಾತ್ರವಲ್ಲದೆ ನಿಮ್ಮ ದೇಹದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.
Sunday, December 29, 2024
ಪ್ರಯತ್ನಿಸಿ
1 https://t.me/kestkannada
2 K set examination📲
Kset full information
https://t.me/kestkannada
3 https://t.me/somalingmuppar
4 https://t.me/bcwdkalaburagi
5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga
6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa
7. https://kawalgasomu.blogspot.com/?m=1
8 https://somalingmuppar76.blogspot.com/?m=1&zx=8ea9acdcb00f4100
9 http://somalingmuppark76.blogspot.com/?m=1
10 https://bcwdhostel.blogspot.com/?m=1
11 http://upparcommunitykar.blogspot.com/
12 https://youtube.com/channel/UCPJZtsdMQ_Zx9a9kqNx3nnQ
13 https://youtube.com/c/somalinguppar9008032272