Followers

Followers somaling m uppar

Sunday, December 29, 2024

ಪ್ರಯತ್ನಿಸಿ

ಸೋಮಲಿಂಗ್ ಉಪ್ಪಾರ್  ಅವರು ಎಲ್ಲಾ ಮೀಡಿಯಾಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಅವರೆಲ್ಲ ಲಿಂಕ್ ಗಳಿಗಾಗಿ ಕೆಳಗಿನವುಗಳನ್ನು ಸಂಪರ್ಕಿಸಬಹುದು

https://t.me/kestkannada

2 K set examination📲
Kset full information
https://t.me/kestkannada

https://t.me/somalingmuppar

4  https://t.me/bcwdkalaburagi

5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga

6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa

7. https://kawalgasomu.blogspot.com/?m=1

https://somalingmuppar76.blogspot.com/?m=1&zx=8ea9acdcb00f4100

http://somalingmuppark76.blogspot.com/?m=1


10 https://bcwdhostel.blogspot.com/?m=1

11 http://upparcommunitykar.blogspot.com/

12 https://youtube.com/channel/UCPJZtsdMQ_Zx9a9kqNx3nnQ

13 https://youtube.com/c/somalinguppar9008032272

Sunday, December 15, 2024

ಬಾಳೆಹಣ್ಣಿನ ಪಡ್ಡು ಸಿಹಿ-ಸಿಹಿಯಾಗಿ ತುಂಬಾನೇ ರುಚಿಯಾಗಿರುತ್ತದೆ


ಬಾಳೆಹಣ್ಣಿನ ಪಡ್ಡು ಸಿಹಿ-ಸಿಹಿಯಾಗಿ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಪಡ್ಡು ತಂಬಾ ಮೃದುವಾಗಿದ್ದು ಬಾಯಲ್ಲಿ ಇಟ್ಟರೆ ಕರಗುವಂತಿರುತ್ತದೆ, ಈ ಬಾಳೆಹಣ್ಣಿನ ಪಡ್ಡು ಮಾಡುವುದು ಸುಲಭದ ವಿಧಾನ ಅಲ್ಲದೆ ಇದನ್ನು ರೆಡಿ ಮಾಡಿ ವಾರದವರೆಗೆ ಇಡಬಹುದು, ಸಂಜೆ ಮಕ್ಕಳಿಗೆ ಇದನ್ನು ಮಾಡಿ ಕೊಟ್ಟರೆ ಚೆನ್ನಾಗಿರುವುದರಿಂದ ಇಷ್ಟಪಟ್ಟು ತಿಂತಾರೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Banana Paddu
ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು1 ಕಪ್‌
100 ಗ್ರಾಂ ಬೆಲ್ಲ
ಒಂದು ಕಪ್ ನೀರು
ಹಣ್ಣಾದ ಬಾಳೆಹಣ್ಣು 3
ಸ್ವಲ್ಪ ತೆಂಗಿನ ತುರಿ

2-3 ಚಮಚ ತುಪ್ಪ
ಸ್ವಲ್ಪ ರೋಸ್ಟ್‌ ಮಾಡಿದ ಬಿಳಿ ಎಳ್ಳು
1/2 ಚಮಚ ಏಲಕ್ಕಿ ಪುಡಿ
1/4 ಚಮಚ ಜೀರಿಗೆ ಪುಡಿ

ಮಾಡುವ ವಿಧಾನ
ನೀವು ಬೆಲ್ಲವನ್ನು ತುರಿಯಿರಿ, ಅದನ್ನು ಬೌಲ್‌ಗೆ ಹಾಕಿ, ಬೆಲ್ಲದ ಅಚ್ಚು ಬದಲಿಗೆ ಬೆಲ್ಲದ ಪುಡಿ ಬಳಸಬಹುದು
ನಂತರ ಬೌಲ್‌ಗೆ ಒಂದು ಕಪ್‌ ನೀರು ಹಾಕಿ ಕಲೆಸಿ
ನಂತರ ಕಾಯಿಸಿ ಬೆಲ್ಲದ ಪಾಕ ತಯಾರಿಸಿ
ಉರಿಂದ ಇಳಿಸಿ ತಣ್ಣಗಾಗಲು ಬಿಡಿ
ನಂತರ ಅಕ್ಕಿಹಿಟ್ಟು, ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
ಬಾಳೆಹಣ್ಣು ಮ್ಯಾಶ್‌ ಮಾಡಿ ಮಿಕ್ಸ್ ಮಾಡಿ, ಬಳಿಕ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಏಲಕ್ಕಿ ಪುಡಿ, ಜೀರಿಗೆ ಪುಡಿ ಸೇರಿಸಿ ಮಿಕ್ಸ್
ಈಗ ಪಡ್ಡು ತವಾಗೆ ತುಪ್ಪ ಸವರಿ ನಂತರ ಪಡ್ಡು ತವಾ ಬಿಸಿ ಮಾಡಿ ಅದರಲ್ಲಿ ಹಿಟ್ಟು ಹಾಕಿ ಬೇಯಸಿ.

ಇತರ ಸಲಹೆ: ಮೊದಲಿಗೆ ನೀರು ತುಂಬಾ ಹಾಕಬೇಡಿ, ಒಂದು ವೇಳೆ ಹಿಟ್ಟು ಗಟ್ಟಿಯಾದರೆ ನೀವು ನೀರುಸೇರಿಸಬಹುದು
ತೆಂಗಿನ ತುರಿ ಹಾಕಬಹುದು ಅಥವಾ ತೆಂಗಿನಕಾಯಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ನಂತರ ಸೇರಿಸಬಹುದು.
ಇದಕ್ಕೆ ಅಡುಗೆ ಸೋಡಾ ಬೇಕಾದರೆ ಸೇರಿಸಬಹುದು
ಬಾಳೆಹಣ್ಣು ತುಂಬಾ ಹಣ್ಣಾಗಿದ್ದರೆ ಇನ್ನೂ ರುಚಿ

ನೀವು ತವಾಗೆ ತುಪ್ಪಕ್ಕಿಂತ ಎಣ್ಣೆ ಸವರಿದರೆ ಅದು ಸುಲಭವಾಗಿ ಕಲ್ಲಿಂದ ತೆಗಿಯಬಹುದು, ಎರಡೂ ಬದಿ ಚೆನ್ನಾಗಿ ಬೇಯಿಸಿ.
ಇದಕ್ಕೆ ಬೇಕಿದ್ದರೆ ಡ್ರೈ ಫ್ರೂಟ್ಸ್‌ ಕೂಡ ಸೇರಿಸಬಹುದು, ಒಣ ಅಂಜೂರ, ಪಿಸ್ತಾ, ಗೋಡಂಬಿ ಇವುಗಳನ್ನು ಸೇರಿಸಬಹುದು.
ನೀವು ಈ ಪಡ್ಡು ಮಾಡಿ ವಾರದವರೆಗೆ ಇಡಬಹುದು
ಮಕ್ಕಳಿಗೆ ಈ ಪಡ್ಡು ಮಾಡಿ ನೀಡುವುದರಿಂದ ಅವರು ಇಷ್ಟಪಟ್ಟು ತಿಂತಾರೆ, ಪೋಷಕಾಂಶದ ಆಹಾರ ಹೊಟ್ಟೆ ಸೇರುತ್ತದೆ.
ಮಧುಮೇಹಿಗಳು ಈ ಪಡ್ಡು ಬೆಲ್ಲ ಸ್ಕಿಪ್‌ ಮಾಡಿ ಅಥವಾ ಸ್ವಲ್ಪವೇ ಬೆಲ್ಲ ಸೇರಿಸಿ ಮಾಡಿ ಸವಿಯಬಹುದು. ಈ ಪಡ್ಡು ಮಿತಿಯಲ್ಲಿ ತಿಂದರೆ ಯಾವುದೇ ತೊಂದರೆಯಿಲ್ಲ.

[ of 5 - Users]
 

Friday, December 13, 2024

ಈ 2024ನೇ ವರ್ಷ ಮುಗಿಯಲು ಕೆಲವು ದಿನಗಳಷ್ಟೇ ಬಾಕಿ ಇದೆ. ಹೊಸ ವರ್ಷ 2025ರಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು. ಹೆಚ್ಚು ಹಣವನ್ನು ಸಂಪಾದಿಸಬೇಕು, ಹೆಚ್ಚು ಸ್ಥಿತಿವಂತನಾಗಬೇಕು. ಇದಕ್ಕಾಗಿ ಚೆನ್ನಾಗಿ ದುಡಿದು, ಗಳಿಸಿ, ಇನ್ವೆಸ್ಟ್‌ ಮಾಡಬೇಕು ಎಂಬ ಗುರಿ ನಿಮ್ಮಲ್ಲಿ ಉಂಟಾಗಿರಬಹುದು.


ಈ 2024ನೇ ವರ್ಷ ಮುಗಿಯಲು ಕೆಲವು ದಿನಗಳಷ್ಟೇ ಬಾಕಿ ಇದೆ. ಹೊಸ ವರ್ಷ 2025ರಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು. ಹೆಚ್ಚು ಹಣವನ್ನು ಸಂಪಾದಿಸಬೇಕು, ಹೆಚ್ಚು ಸ್ಥಿತಿವಂತನಾಗಬೇಕು. ಇದಕ್ಕಾಗಿ ಚೆನ್ನಾಗಿ ದುಡಿದು, ಗಳಿಸಿ, ಇನ್ವೆಸ್ಟ್‌ ಮಾಡಬೇಕು ಎಂಬ ಗುರಿ ನಿಮ್ಮಲ್ಲಿ ಉಂಟಾಗಿರಬಹುದು.


A penny saved is a penny earned ಎಂಬ ಮಾತಿದೆ. ಅಂದರೆ ನೀವು ಉಳಿತಾಯ ಮಾಡುವ ಒಂದು ಪೈಸೆಯೂ, ಒಂದು ಪೈಸೆ ಸಂಪಾದಿಸಿದ್ದಕಕೆ ಸಮಾನ. ಈಗ ಒಂದು ಪೈಸೆ, ಒಂದು ರೂಪಾಯಿಗೆ ಮೌಲ್ಯ ಇಲ್ಲವೇ ಇಲ್ಲ ಎನ್ನುವಷ್ಟು ಸವಕಳಿಯಾಗಿರುವುದರಿಂದ, ಉಳಿತಾಯ ಮಾಡುವ ಪ್ರತಿ ಒಂದು ಲಕ್ಷ ರೂಪಾಯಿಯೂ, ಮತ್ತೊಂದು ಲಕ್ಷ ರೂ. ಗಳಿಸಿದ್ದಕ್ಕೆ ಸಮ ಎಂದು ಬದಲಾಯಿಸಿಕೊಳ್ಳಬಹುದು. ಆದರೆ

ಜೀವನದಲ್ಲಿ ನೀವು ಹಣ ಗಳಿಸುವುದಷ್ಟೇ ಮುಖ್ಯವಾಗುವುದಿಲ್ಲ. ಗಳಿಸಿದ ಹಣವನ್ನು ಉಳಿತಾಯ ಮಾಡುವುದು, ಬಳಿಕ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ, ನೀವು ಕೋಟಿ ಗಳಿಸಿದರೂ, ಅದನ್ನು ಉಳಿಸಲಾರಿರಿ ಎಂಬ ಸಂದೇಶವನ್ನು ಇದು ತಿಳಿಸುತ್ತದೆ.


ಇದಕ್ಕೊಂದು ‌ಮನ ಕಲಕುವ ಉದಾಹರಣೆಯನ್ನು ನಾವು ಸ್ಮರಿಸಿಕೊಳ್ಳಲೇಬೇಕು. ಏಕೆಂದರೆ ಇದರಿಂದ ಎಲ್ಲರೂ ಕಲಿಯಬಹುದಾದ ಪಾಠ ದೊಡ್ಡದು.


14 ವರ್ಷಗಳ ಹಿಂದೆ, ಅಂದರೆ 2011ರಲ್ಲಿ ಬಿಹಾರ ಮೂಲದ ಸುಶೀಲ್‌ ಕುಮಾರ್‌ ಎಂಬ ಹುಡುಗನೊಬ್ಬ, ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಸರಣಿಯಲ್ಲಿ ಬರೋಬ್ಬರಿ 5 ಕೋಟಿ ರೂ. ಗೆದ್ದು ರಾತ್ರೋರಾತ್ರಿ ದೇಶದಲ್ಲೇ ಮನೆ ಮಾತಾಗಿದ್ದ. ಪ್ರತಿಭಾವಂತನಾಗಿದ್ದ ಸುಶೀಲ್‌ ಕುಮಾರ್‌ಗೆ ದುರದೃಷ್ಟವಶಾತ್‌ ಅಷ್ಟೊಂದು ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿರಲಿಲ್ಲ. ಊರಿನಲ್ಲಿ ಬಂಧುಗಳು, ಸ್ನೇಹಿತರೆಲ್ಲ ಸುತ್ತುವರಿದರು. ಆರಂಭದ ದಿನಗಳ ವಿಜಯೋತ್ಸವ, ಮಾನ-ಸಮ್ಮಾನಗಳು ನಡೆದವು. ಜತೆಗೆ ಸುಶೀಲ್‌ ಕುಮಾರ್‌, ಕೋಟಿಗಟ್ಟಲೆ ದುಡ್ಡನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರು. ಜತೆಗೆ ಹಲವು ನಯವಂಚಕರೂ ಯಾಮಾರಿಸಿದರು. ಪ್ರತಿಭಾವಂತನಾಗಿದ್ದರೂ, ವೈಯಕ್ತಿಕ ಹಣಕಾಸು ವಿಚಾರಗಳಲ್ಲಿ ಸುಶೀಲ್‌ ಕುಮಾರ್‌ ಹಿಂದುಳಿದಿದ್ದರು. ಹೀಗಾಗಿ ಒತ್ತಡಕ್ಕೆ ಸಿಲುಕಿದ ಯುವಕ ಖಿನ್ನತೆಗೆ ಜಾರಿದ. ಕುಡಿತದ ವ್ಯಸನವೂ ವೈಯಕ್ತಿಕ ಜೀವನಕ್ಕೆ ಸಮಸ್ಯೆಯಾಯಿತು. ಕ್ರಮೇಣ ಸುಶೀಲ್‌ ಕುಮಾರ್‌ ಐದು ಕೋಟಿಯನ್ನೂ ಕಳೆದುಕೊಂಡು ದಿವಾಳಿಯಾದ. ಜೀವನ ನಿರ್ವಹಣೆಗೆ ಹಾಲು ಮಾರಾಟ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಬಗ್ಗೆಯೂ ಸುದ್ದಿಯಾಯಿತು.


ಇತ್ತೀಚಿನ ವರ್ತಮಾನದ ಪ್ರಕಾರ, ಸುಶೀಲ್‌ ಕುಮಾರ್‌ ಹಳಿ ತಪ್ಪಿದ ಬದುಕನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಧಾರಣೆಯಾಗುತ್ತಿದ್ದಾರೆ. ಬಿಹಾರದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಈಗ ಹೈ ಸ್ಕೂಲ್‌ ಶಿಕ್ಷಕರಾಗಿ ಪರಿವರ್ತನೆಯಾಗಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ ಶಾಲೆಗೆ ಲೈಬ್ರೆರಿಯನ್ನು ಕಟ್ಟಿಸಿದ್ದಾರೆ.

ಸುಶೀಲ್‌ ಕುಮಾರ್‌ ಅವರ ಈ ಕಥೆ, ಉಳಿತಾಯದ ಮಹತ್ವವನ್ನು ತಿಳಿಸುತ್ತದೆ.


ಉಳಿತಾಯ ಮಾಡುವ ಸಂಕಲ್ಪ ತೊಟ್ಟ ಬಳಿಕ ಖರ್ಚುಗಳನ್ನು ಕಡಿಮೆ ಮಾಡಲು ನಮ್ಮ ಮುಂದಿರುವ ಉತ್ತಮ ಅವಕಾಶಗಳನ್ನು ಗಮನಿಸಬೇಕು. ಹಣಕಾಸು ಜಾಗೃತಿಯ ಮೊದಲ ಹೆಜ್ಜೆಯೇ ನಿಮ್ಮ ಖರ್ಚುಗಳ ಮೇಲೆ ನಿಗಾ ವಹಿಸುವುದು. ಮಾನಿಟರ್‌ ಮಾಡುವುದು.


ನೀವು ದಿನ ನಿತ್ಯದ ಪ್ರತಿಯೊಂದು ಖರ್ಚುಗಳನ್ನು ಒಂದು ಪುಸ್ತಕದಲ್ಲಿ ಬರೆಯುತ್ತಾ ಹೋಗಿ. ಖರ್ಚು ಮಾಡಿದ ಮೊತ್ತ ಎಷ್ಟೇ ಆಗಿರಲಿ. ಬೇಕಿದ್ದರೆ ಇದಕ್ಕಾಗಿಯೇ ಮೊಬೈಲ್‌ ಅಪ್ಲಿಕೇಶನ್‌ಗಳು ಸಿಗುತ್ತವೆ. ಖರ್ಚು ಮತ್ತು ಉಳಿತಾಯವನ್ನು ನೋಟ್‌ ಮಾಡಿ ಇಟ್ಟುಕೊಳ್ಳುವುದು ನಿರ್ಣಾಯಕ.


ಹಣವನ್ನು ಎಷ್ಟು ಉಳಿಸಬೇಕು ಮತ್ತು ಎಷ್ಟು ಖರ್ಚು ಮಾಡಬೇಕು ಎಂಬುದು ಹಲವರಿಗೆ ಕಾಡುವ ಪ್ರಶ್ನೆಯಾಗಿರಬಹುದು. ಇದಕ್ಕಾಗಿ ಹಣಕಾಸು ಸಲಹೆಗಾರರು 50/30/20 ಎಂಬ ಸುಲಭ ಸೂತ್ರವನ್ನು ಜನಪ್ರಿಯಗೊಳಿಸಿದ್ದಾರೆ. ಮೊದಲಿಗೆ ನಿಮ್ಮ ಆದಾಯವನ್ನು ಮೂರು ಕೆಟಗರಿಗಳಲ್ಲಿ ಹಂಚಿಕೊಳ್ಳಿ. ಅವುಗಳೆಂದರೆ- ನಿಮ್ಮ ಅಗತ್ಯಗಳಿಗೆ (Needs), ನಿಮ್ಮ ಬಯಕೆಗಳಿಗೆ (Wants) ಮತ್ತು ಉಳಿತಾಯಕ್ಕೆ (Savings) ಆದಾಯ.


ಅಗತ್ಯ ಅಥವಾ ಅವಶ್ಯಕತೆಗಳಿಗೆ ನಿಮ್ಮ ಆದಾಯದ 50% ಪಾಲನ್ನು ಖರ್ಚು ಮಾಡಿರಿ. ದಿನಸಿ, ಬಟ್ಟೆ, ಮನೆ ಬಾಡಿಗೆ, ಸಣ್ಣ ಪುಟ್ಟ ಸಾಲಗಳು, ಆರೋಗ್ಯ ವೆಚ್ಚ ಇವೆಲ್ಲವು ಅಗತ್ಯಗಳು. ಆದಾಯದ 30% ಮೊತ್ತವನ್ನು ಬಯಕೆಗಳಿಗೆ (Wants) ಖರ್ಚು ಮಾಡಿರಿ. ಮನರಂಜನೆ, ವಿಹಾರ, ಹವ್ಯಾಸಗಳಿಗೆ ಬಳಸಿಕೊಳ್ಳಿ. ಆದರೆ ಆದಾಯದ 20% ಮೊತ್ತವನ್ನು ಕಡ್ಡಾಯವಾಗಿ ಉಳಿತಾಯಕ್ಕೆ (Savings) ತೆಗೆದಿರಿಸಿ.


ಹೀಗಿದ್ದರೂ, ಪ್ರತಿಯೊಬ್ಬರಿಗೂ ಇದೊಂದೇ ಸೂತ್ರ ಪಕ್ಕಾ ಅನ್ವಯವಾಗುತ್ತದೆ ಎಂದು ಹೇಳಲಾಗದು. ಇದು ನಿಮ್ಮ ಆದಾಯ, ವಾಸದ ಸ್ಥಳವನ್ನೂ ಆಧರಿಸಿರಬಹುದು. ಆದರೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯಕ್ಕೆ ಆದ್ಯತೆ ನೀಡುವುದನ್ನು ಮರೆಯದಿರಿ. ಆದಾಯದ ನೂರಕ್ಕೆ ನೂರು ಖರ್ಚು ಸಮಂಜಸವಲ್ಲ. ಇಂತಹ ಸೂತ್ರವನ್ನು ಪ್ರತಿ ತಿಂಗಳೂ ತಪ್ಪದೆ ಅನುಸರಿಸುವುದರಿಂದ ನಿಮ್ಮ ಹಣಕಾಸು ವ್ಯವಸ್ಥೆ ಅಚ್ಚುಕಟ್ಟಾಗಿ, ಸಮತೋಲನದಿಂದ ಬೆಳೆಯಬಲ್ಲುದು.


ಬಿಲ್‌ಗಳನ್ನು ಮತ್ತು ಸಾಲಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದಲಾ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಬಳಕೆಯಲ್ಲಿ ಇರದ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಅನ್‌ ಪ್ಲಗ್‌ ಮಾಡುವುದು, ಎಲ್‌ಇಡಿ ಬಲ್ಬ್‌ಗಳ ಬಳಕೆ ಇತ್ಯಾದಿ ಸಣ್ಣ ಬದಲಾವಣೆಗಳನ್ನು ಮಾಡಬಹುದು. ಜತೆಗೆ ಸೋಲಾರ್‌ ಪವರ್‌ ಪ್ಯಾನೆಲ್‌ಗಳನ್ನು ಬಳಸಿಯೂ ಹಣ ಉಳಿತಾಯ ಮಾಡಬಹುದು. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸೂರ್ಯ ಘರ್‌ ಎಂಬ ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ಭವಿಷ್ಯದ ದಿನಗಳಲ್ಲಿ ಸೌರ ಶಕ್ತಿಯ ಬಳಕೆ ದೇಶದಲ್ಲಿ ಮತ್ತಷ್ಟು ಜನಪ್ರಿಯವಾಗಲಿದೆ. ಐದು ಕಿಲೋ ವ್ಯಾಟ್‌ ರೂಫ್‌ ಟಾಪ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸಿದರೂ ತಿಂಗಳಿಗೆ 600 ಯುನಿಟ್‌ ವಿದ್ಯುತ್‌ ಉಳಿತಾಯ ಮಾಡಬಹುದು. ಸೋಲಾರ್‌ ದ್ವಿ ಚಕ್ರ ವಾಹನವನ್ನೂ ರಿಚಾರ್ಜ್‌ ಮಾಡಬಹುದು. ಇದರಿಂದ ಪೆಟ್ರೋಲ್‌ಗೆ ಮಾಡುವ ಖರ್ಚನ್ನೂ ಉಳಿತಾಯ ಮಾಡಬಹುದು.


ನೀವು ಗೃಹ ಸಾಲ, ವಾಹನ ಸಾಲವನ್ನು ಹೊಂದಿರಬಹುದು. ಪ್ರತಿ ವರ್ಷ ಕನಿಷ್ಠ ಒಂದೆರಡು ಕಂತುಗಳನ್ನು ಹೆಚ್ಚುವರಿಯಾಗಿ ಮರು ಪಾವತಿಸಿದರೆ, ಬೇಗನೆ ಸಾಲ ಮುಗಿಯುವುದಲ್ಲದೆ, ಲಕ್ಷಾಂತರ ರೂ. ಉಳಿತಾಯವೂ ಸಾಧ್ಯವಾಗುತ್ತದೆ.


ಸೇವಿಂಗ್ಸ್‌ ಅಕೌಂಟ್‌ ಸ್ಟ್ರಾಟಜಿ


ಸೇವಿಂಗ್ಸ್‌ ಅಕೌಂಟ್‌ ಸ್ಟ್ರಾಟಜಿಗಳನ್ನೂ 2025ರಲ್ಲಿ ಮಾಡಬಹುದು. ಇದಕ್ಕಾಗಿ ಮೊದಲನೆಯದಾಗಿ ಹೆಚ್ಚು ಬಡ್ಡಿ ದರ ನೀಡುವ ಸೇವಿಂಗ್ಸ್‌ ಅಕೌಂಟ್‌ಗೆ ಬದಲಾಯಿಸಿಕೊಳ್ಳಿ. ಎರಡನೆಯದಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟದ ಪ್ಲಾನ್‌ ಅಥವಾ ಸಿಪ್‌ ಮೂಲಕ ಪ್ರತಿ ತಿಂಗಳೂ ನಿಮ್ಮ ಕೈಲಾಗುವಷ್ಟು ಹೂಡಿಕೆ ಮಾಡಿ. ರಿಕರಿಂಗ್‌ ಡೆಪಾಸಿಟ್‌, ಸಾರ್ವಜನಿಕ ಭವಿಷ್ಯನಿಧಿ ಅಥವಾ ಪಿಪಿಎಫ್‌, ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌ ಅಥವಾ ಎನ್‌ಪಿಎಸ್‌, ಸುಕನ್ಯಾ ಸಮೃದ್ಧಿ ಕೂಡ ನಿಯಮಿತ ಉಳಿತಾಯಕ್ಕೆ ಸಹಕರಿಸುತ್ತದೆ. ಅದು ನಿಮ್ಮ ಸ್ಯಾಲರಿ ಅಕೌಂಟ್‌ನಿಂದಲೇ ಟ್ರಾನ್ಸ್‌ಫರ್‌ ಆಗುವಂತೆ ಮಾಡಿಕೊಳ್ಳಿ. ಖರ್ಚಿಗೆ ಮುನ್ನ ಉಳಿತಾಯಕ್ಕೆ ಆದ್ಯತೆ ನೀಡಿ.

ಹಾಗಾದರೆ ಉಳಿತಾಯ ಏಕೆ ಮಾಡಬೇಕು? ಭವಿಷ್ಯದಲ್ಲಿ ಎಂದೋ ಒಂದು ದಿನ ಮಾಡುವ ಖರ್ಚನ್ನು ಈಗಲೇ ಮಾಡಿ ಎಂಜಾಯ್ ಮಾಡಬಹುದಲ್ಲವೇ ಎಂದು ಅನ್ನಿಸಬಹುದು. ಆದರೆ ಅದೇ ನಾವು ಮಾಡುವ ತಪ್ಪು. ಭವಿಷ್ಯದಲ್ಲಿ ಬರಬಹುದಾದ ಹಣಕಾಸು ವಿಪತ್ತುಗಳನ್ನು ಎದುರಿಸಲು ಎಮರ್ಜೆನ್ಸಿ ಫಂಡ್‌ ಅತ್ಯಂತ ಅಗತ್ಯ. ನಿವೃತ್ತಿಯ ಬದುಕಿಗೂ ಹೂಡಿಕೆ ಮಾಡುವುದು ಮುಖ್ಯ. ಮಕ್ಕಳ ಶಿಕ್ಷಣ, ಮದುವೆ, ಮನೆ, ಫಾರ್ಮ್‌ ಹೌಸ್‌, ಬಂಗಾರ, ಬೆಳ್ಳಿ, ವಾಹನ ಖರೀದಿಗೂ ದೊಡ್ಡ ಮತ್ತದ ಹಣ ಬೇಕಾಗುತ್ತದೆ. ಇದನ್ನೆಲ್ಲ ಹೊಂದಿಸಲು ಉಳಿತಾಯದ ಹವ್ಯಾಸವೇ ಮೊಟ್ಟ ಮೊದಲ ಹೆಜ್ಜೆ ಎಂಬುದನ್ನು ಮರೆಯಬಾರದು.


Wednesday, September 25, 2024

ದಿನವೂ ಮೊಳಕೆ ಬರಿಸಿದ ಹೆಸರುಕಾಳು ತಿಂದರೆ ರಕ್ತಹೀನತೆ, ಕ್ಯಾನ್ಸರ್ ಸೇರಿ ಈ ಹತ್ತು ಕಾಯಿಲೆಗಳು ಹತ್ತಿರ ಸುಳಿಯಲ್ಲ

ಮೋಳಕೆ ಬರಿಸಿದ ಹೆಸರು ಕಾಳಿನ ಉಪಯೋಗಗಳು ಒಂದೆರಡಲ್ಲ, ಹಲವು ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವ ಈ ಕಾಳುಗಳಿಗೆ ಹಲವು ರೋಗಗಳನ್ನು ಬರದಂತೆ ತಡೆಯುವ ಸಾಮರ್ಥ್ಯವಿದೆ ಎಂಬ ವಿಚಾರ ನಿಮಗೆ ಗೊತ್ತಾ? ಮೊಳಕೆ ಬರಿಸಿದ ಮೂಂಗ್ ದಾಲ್ ಅಥವಾ ಹೆಸರು ಕಾಳು ಪೋಷಕಾಂಶಗಳಾದ ಪ್ರೊಟಿನ್, ಫೈಬರ್, ಮ್ಯಾಗ್ನೇಷಿಯಂ, ಫಾಸ್ಪರಸ್‌, ಪೊಟ್ಯಾಷಿಯಂ, ಝಿಂಕ್, ಕಬ್ಬಿಣ, ತಾಮ್ರ, ವಿಟಾಮಿನ್ ಎ, ಬಿ, ಸಿ,ಇ ಅಂಶಗಳನ್ನು ಹೇರಳವಾಗಿ ಹೊಂದಿದೆ.

ಆರೋಗ್ಯದ ಬಗ್ಗೆ ಕಾಳಜಿ ಇರುವ ಬಹುತೇಕರು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸವನ್ನು ಇತ್ತೀಚೆಗೆ ಹೆಚ್ಚಾಗಿ ರೂಢಿಸಿಕೊಂಡಿದ್ದಾರೆ. ಈ ಮೊಳಕೆ ಕಾಳಿನಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಹಲವು ರೋಗಗಳನ್ನು ಬರದಂತೆ ತಡೆಯುತ್ತವೆ. ಇಲ್ಲಿ ಮೊಳಕೆ ಕಾಳು ತಿನ್ನುವುದರಿಂದ ನಿಮ್ಮ ಹತ್ತಿರವೂ ಸುಳಿಯದ 10 ರೋಗಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಚರ್ಮದ ಸಮಸ್ಯೆ: ಈ ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿರುವ ಆಂಟಿಯೊಕ್ಸಿಂಡೆಂಟ್‌ಗಳು ಹಾಗೂ ವಿಟಾಮಿನ್‌ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಇದರಿಂದ ಚರ್ಮದ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ,

ಮೂಳೆಯ ಆರೋಗ್ಯ: ಈ ಮೊಳಕೆ ಕಾಳಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಅಂಶಗಳು ನಿಮ್ಮ ಮೂಳೆಯನ್ನು ಬಲಗೊಳಿಸುತ್ತವೆ. 
ಕ್ಯಾನ್ಸರ್‌: ಮೊಳಕೆಯೊಡೆದ ಹೆಸರು ಕಾಳಿನಲ್ಲಿರುವ ಫೈಟೊಕೆಮಿಕಲ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತಹೀನತೆ ಅಥವಾ ಅನೀಮಿಯಾ: ಹೆಸರು ಕಾಳಿನ ಮೊಳಕೆ ಕಾಳುಗಳು ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವನ್ನು ಹೇರಳವಾಗಿ ಹೊಂದಿದೆ. ಇದು ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಒತ್ತಡ ಮತ್ತು ಆತಂಕ: ಹಾಗೆಯೇ ಈ ಕಾಳುಗಳು ಇದು ನರಮಂಡಲವನ್ನು ಶಮನಗೊಳಿಸುವ ಪೋಷಕಾಂಶಗಳನ್ನು ಹೊಂದಿದ್ದು, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದ್ರೋಗ: ಹೆಚ್ಚಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ, ಮೊಳಕೆಯೊಡೆದ ಹೆಸರು ಕಾಳುಗಳು ಹೃದಯದ ಆರೋಗ್ಯವನ್ನು ಚೆನ್ನಾಗಿರಿಸುತ್ತದೆ. ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ: ಕಾಳಿನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಜೀರ್ಣಕಾರಿ ಸಮಸ್ಯೆಗಳು: ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ, ಜೀರ್ಣಾಂಗವನ್ನು ಸ್ವಚ್ಛವಾಗಿರಿಸುತ್ತದೆ.

ತೂಕ ನಿರ್ವಹಣೆ: ಈ ಕಾಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಪ್ರೊಟೀನ್‌ಗಳನ್ನು ಹೊಂದಿದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ, ಇದನ್ನು ನಿಮ್ಮ ಆಹಾರದಲ್ಲಿ ದಿನವೂ ಬಳಕೆ ಮಾಡಿ.



Tuesday, September 24, 2024

7th Pay Commission: ಸರ್ಕಾರಿ ನೌಕರರ ನಿವೃತ್ತಿ ವೇತನ, ಇತರ ಶಿಫಾರಸುಗಳು


ಆಯೋಗ ನಿವೃತ್ತ ನೌಕರರ ಕುರಿತು ಮಾಡಿರುವ ಶಿಫಾರಸುಗಳು ಹೀಗಿವೆ.

ರಾಜ್ಯ ಸರ್ಕಾರಿ ನೌಕರರ ಚಾಲ್ತಿಯಲ್ಲಿರುವ ವಯೋನಿವೃತ್ತಿಯ ವಯಸ್ಸು 60 ವರ್ಷಗಳಾಗಿರುತ್ತವೆ. ದಿನಾಂಕ 01.07.2008 ರಿಂದ ಜಾರಿಗೆ ಬರುವಂತೆ 58 ರಿಂದ 60 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಜಾರಿಯಲ್ಲಿರುವ ನಿವೃತ್ತಿ ವಯಸ್ಸು 60 ವರ್ಷಗಳೆಂಬುದನ್ನು ಆಯೋಗವು ಗಮನಿಸಿದೆ. ಆದಾಗ್ಯೂ ನಿವೃತ್ತಿ ವಯಸ್ಸು ಕೇರಳದಲ್ಲಿ 56 ವರ್ಷಗಳು ಮತ್ತು ಆಂಧ್ರ ಪ್ರದೇಶದಲ್ಲಿ 62 ವರ್ಷಗಳಾಗಿರುತ್ತದೆ.


ಪಂಜಾಬ್‌ನಲ್ಲಿ ಗ್ರೂಪ್ ಎ, ಬಿ ಮತ್ತು ಸಿ ನೌಕರರಿಗೆ ನಿವೃತ್ತಿ ವಯಸ್ಸು 58 ವರ್ಷಗಳು ಮತ್ತು ಗ್ರೂಪ್-ಡಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳಾಗಿರುತ್ತದೆ. ಸಾಮಾನ್ಯವಾಗಿ, ಆಡಳಿತಾತ್ಮಕ ದೃಷ್ಟಿಯಿಂದ, ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಏರಿಸಿ 2 ವರ್ಷಗಳಿಗೆ ಮುಂದೂಡಲ್ಪಡುವುದರಿಂದ ನಿವೃತ್ತಿ ವೇತನದ ಸೌಲಭ್ಯಗಳ ಗಮನಾರ್ಹ ಪಾವತಿ (ನಿವೃತ್ತಿ ಸಮಯದಲ್ಲಿನ ಮರಣ ಮತ್ತು ನಿವೃತ್ತಿ ಉಪದಾನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಇಡಿಗಂಟಿನ ಪಾವತಿ), ಮತ್ತು ಇದು ನೌಕರರಿಗೆ, ಮತ್ತೆರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುವ ಅವಕಾಶದಿಂದಾಗಿ ಮತ್ತು ಅಲ್ಪಕಾಲಿಕ ಸಂಪನ್ಮೂಲಗಳ ಬಿಕ್ಕಟ್ಟನ್ನು ಎದುರಿಸುತ್ತಿರುವ ಸರ್ಕಾರಕ್ಕೆ, ಇಬ್ಬರಿಗೂ ಸಂತುಷ್ಟಕರವಾದ ನಿರ್ಧಾರವೆನ್ನಬಹುದು.


ಆದಾಗ್ಯೂ, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಪ್ರವೇಶ ಹಂತದ ನೇಮಕಾತಿಯ ಹರಿವು ತನ್ನ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿರುವುದರಿಂದ, ಈ ವಿಷಯವನ್ನು ಮರುಯೋಚಿಸುವ ಅಗತ್ಯವಿಲ್ಲವೆಂದು ಆಯೋಗವು ಭಾವಿಸುತ್ತದೆ ಮತ್ತು ಸರ್ಕಾರಿ ನೌಕರರ ನಿವೃತ್ತಿಗೆ ಪ್ರಸ್ತುತ ಜಾರಿಯಲ್ಲಿರುವ ವಯೋಮಿತಿಯನ್ನು ಮುಂದುವರೆಸಲು ಶಿಫಾರಸು ಮಾಡಿದೆ.

ನಿವೃತ್ತಿ ವೇತನ: ಪೂರ್ಣ ಪ್ರಮಾಣದ ನಿವೃತ್ತಿ ವೇತನಕ್ಕೆ ಬೇಕಾದ ಕನಿಷ್ಠ ಅರ್ಹತಾದಾಯಕ ಸೇವೆ ಕುರಿತು ಆಯೋಗವು ಮಾಹಿತಿ ನೀಡಿದೆ. ಪ್ರಸ್ತುತ ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಕನಿಷ್ಠ ಅರ್ಹತಾದಾಯಕ ಸೇವೆಯು 30 ವರ್ಷಗಳಿಗೆ ನಿಗದಿಯಾಗಿರುತ್ತದೆ. ದಿನಾಂಕ 11.01.2019 ರಂದು ಇದನ್ನು ರಾಜ್ಯ ಸರ್ಕಾರವು 33 ವರ್ಷಗಳಿಂದ 30 ವರ್ಷಗಳಿಗೆ ಇಳಿಸಿದೆ. ಕನಿಷ್ಠ ಅರ್ಹತಾದಾಯಕ ಸೇವೆಯನ್ನು 30 ವರ್ಷಗಳಿಂದ 25 ವರ್ಷಗಳಿಗೆ ಮತ್ತಷ್ಟು ಇಳಿಸುವಂತೆ ಕೋರಿ ಆಯೋಗವು ಮನವಿಗಳನ್ನು ಸ್ವೀಕರಿಸಿರುತ್ತದೆ.


ರಾಜ್ಯ ಸರ್ಕಾರಕ್ಕೆ ಉನ್ನತ ಮಟ್ಟದಲ್ಲಿ ಅನುಭವಿ ಅಧಿಕಾರಿಗಳ ಅಗತ್ಯವಿದ್ದು ಮತ್ತು ಪ್ರಸ್ತುತ, ಕನಿಷ್ಠ ಅರ್ಹತಾದಾಯಕ ಸೇವೆಯ ವಯಸ್ಸನ್ನು ಮತ್ತಷ್ಟು ಕಡಿತಗೊಳಿಸುವುದು ಆಡಳಿತಾತ್ಮಕವಾಗಿ ಪ್ರಯೋಜನಕಾರಿಯಲ್ಲ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಸರ್ಕಾರಿ ಸೇವೆಗೆ ತಡವಾಗಿ ಸೇರಿದ ಕಾರಣಕ್ಕಾಗಿ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಸಲ್ಲಿಸದೇ ನಿವೃತ್ತಿಯಾಗುವ ನೌಕರರು ತಮ್ಮ ಸೇವೆಯ ವರ್ಷಗಳಿಗನುಸಾರ ನಿವೃತ್ತಿ ವೇತನವನ್ನು ಪಡೆಯುವುದರಿಂದ, ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮತ್ತಷ್ಟು ಇಳಿಸಲು ಯಾವುದೇ ಆಧಾರವಿಲ್ಲ ಎಂದು ಆಯೋಗವು ಭಾವಿಸುತ್ತದೆ. ಆದ್ದರಿಂದ, ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮುಂದುವರೆಸಲು ಆಯೋಗವು ಶಿಫಾರಸು ಮಾಡಿದೆ.


ಹೆಚ್ಚುವರಿ ನಿವೃತ್ತಿ ವೇತನ: ಪ್ರಸ್ತುತ, ಹೆಚ್ಚುವರಿ ನಿವೃತ್ತಿ ವೇತನವನ್ನು ಮೂಲ ವೇತನದ ಶೇ.20, ಶೇ.30, ಶೇ.40, ಶೇ.50 ಮತ್ತು ಶೇ.100 ನ್ನು ಅನುಕ್ರಮವಾಗಿ 80-85 ವಯಸ್ಸಿನವರಿಗೆ, 85-90 ವಯಸ್ಸಿನವರಿಗೆ, 90-95 ವಯಸ್ಸಿನವರಿಗೆ, 95-100 ವಯಸ್ಸಿನವರಿಗೆ ಮತ್ತು 100 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರಿಗೆ ಸಂದಾಯ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಕಲ್ಪಿಸಿರುವ ಅವಕಾಶಗಳನ್ನು ಹೋಲುತ್ತದೆ.


ಕೆಎಸ್‌ಜಿಇಎ ಮತ್ತು ಕೆಎಸ್‌ಜಿಆರ್‌ಇಎ ಎರಡೂ ಸಂಘಗಳು, 70 ರಿಂದ 80 ವಯೋಮಾನದವರಿಗೂ ಶೇ.10 ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಸಂದಾಯ ಮಾಡಲು ಕೋರಿರುತ್ತವೆ. ಈ ವಯೋಮಾನದ ನಿವೃತ್ತಿ ವೇತನದಾರರಿಗೆ ಹೆಚ್ಚುವರಿ ನಿವೃತ್ತಿ ವೇತನ ಸೌಲಭ್ಯದ ಈ ಅವಕಾಶವು ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವುದನ್ನು ಆಯೋಗವು ಗಮನಿಸಿದೆ. ಈ ಬೇಡಿಕೆಯು ಪರಿಗಣನೆಗೆ ಅರ್ಹವೆಂದು ಪರಿಗಣಿಸಿ, 70 ರಿಂದ 80 ವರ್ಷಗಳ ವಯಸ್ಸಿನ ಸಮೂಹದ ಪಿಂಚಣಿದಾರರಿಗೆ ಶೇ.10 ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಪಾವತಿಸಲು ಆಯೋಗವು ಶಿಫಾರಸು ಮಾಡಿದೆ.



me

🪀 ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಲು ಲಿಂಕನ್ನು ಒತ್ತಿ. 
👇👇👇👇👇👇👇👇
👉https://whatsapp.com/channel/0029Va9sPs92ER6bR7mBuq1v


✍️ Blogger Follow me
👇👇👇👇👇👇👇👇👉https://somalinggovernmentemployees76.blogspot.com/


🎞️ YouTube Channel Follow me 
👇👇👇👇👇👇👇👇👇👉https://youtube.com/@somalingupparkawalga76?si=LJapmR94csrqMRju


📲 Face Book 📚 
👇👇👇👇👇👇👇👇👉https://m.facebook.com/somalingm.uppar.9/?profile_tab_item_selected=about

✍️ Instagram 👇👇👇👇👇👇👇👇👇👇👉👉https://www.instagram.com/somalingmuppar76/


✍️ Telegram Follower 👉👇👇👇👇👇👇👇👉https://t.me/Grampanchayatkawalga

✍️🎞️ Sharechat Follower 👇👇👇👇👇👉https://youtube.com/@somalingupparkawalga76?si=qRoR37nsyLPf0Xsr

Sunday, September 8, 2024

ಉದ್ಯೋಗವಾರ್ತೆ : 10 ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : `CRPF' 11,000 ಕ್ಕೂ ಹೆಚ್ಚು ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸ್ ಪಡೆಗಳಲ್ಲಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶ. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ನಲ್ಲಿ 11000 ಕ್ಕೂ ಹೆಚ್ಚು ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಈ ಹುದ್ದೆಗಳಿಗೆ ನೇಮಕಾತಿಯನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಜಿಡಿ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

CRPAF ನಲ್ಲಿ ಈ ಖಾಲಿ ಹುದ್ದೆಗೆ ಅರ್ಜಿ ಪ್ರಕ್ರಿಯೆಯು 5 ಸೆಪ್ಟೆಂಬರ್ 2024 ರಿಂದ ಪ್ರಾರಂಭವಾಗಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ 14 ಅಕ್ಟೋಬರ್ 2024 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಖಾಲಿ ಹುದ್ದೆಗೆ ಶುಲ್ಕವನ್ನು ಠೇವಣಿ ಮಾಡಲು 15 ಅಕ್ಟೋಬರ್ 2024 ರವರೆಗೆ ಸಮಯವನ್ನು ನೀಡಲಾಗಿದೆ. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.

CRPF ಕಾನ್ಸ್ಟೇಬಲ್ ನೇಮಕಾತಿ: ಈ ರೀತಿಯ ಫಾರ್ಮ್ ಅನ್ನು ಭರ್ತಿ ಮಾಡಿ

ಈ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು, ಮೊದಲು ನೀವು SSC ಪರೀಕ್ಷೆಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಹೋಗಬೇಕು.

ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಸ ನವೀಕರಣಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.

ಇದರ ನಂತರ CRPF ನೇಮಕಾತಿ 2024 ರಲ್ಲಿ SSC ಕಾನ್ಸ್‌ಟೇಬಲ್ GD ಲಿಂಕ್ ಅನ್ನು ಕ್ಲಿಕ್ ಮಾಡಿ.
ಕಾನ್ಸ್‌ಟೇಬಲ್ GD ಲಿಂಕ್ ಅನ್ನು ಕ್ಲಿಕ್ ಮಾಡಿ.

ಮುಂದಿನ ಪುಟದಲ್ಲಿ ಆನ್‌ಲೈನ್‌ನಲ್ಲಿ ಅನ್ವಯಿಸು ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.

ಈಗ ವಿನಂತಿಸಿದ ವಿವರಗಳೊಂದಿಗೆ ನೋಂದಾಯಿಸಿ.

ನೋಂದಣಿ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಅರ್ಜಿ ಸಲ್ಲಿಸಿದ ನಂತರ, ಖಂಡಿತವಾಗಿಯೂ ಪ್ರಿಂಟ್ ತೆಗೆದುಕೊಳ್ಳಿ.

CRPF ಕಾನ್ಸ್ಟೇಬಲ್ ಹುದ್ದೆಯ ವಿವರಗಳು

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಖಾಲಿ ಇರುವ ಒಟ್ಟು 11,541 ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪುರುಷರಿಗೆ 11,299 ಮತ್ತು ಮಹಿಳೆಯರಿಗೆ 242 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪುರುಷರಲ್ಲಿ, ಸಾಮಾನ್ಯ ವರ್ಗದ 4765 ಹುದ್ದೆಗಳು, ಇಡಬ್ಲ್ಯೂಎಸ್‌ನ 1130 ಹುದ್ದೆಗಳು, ಒಬಿಸಿಯ 2510 ಹುದ್ದೆಗಳು, ಎಸ್‌ಸಿಯ 1681 ಹುದ್ದೆಗಳು ಮತ್ತು ಎಸ್‌ಟಿಯ 1213 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಎಸ್‌ಎಸ್‌ಸಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, 10 ನೇ ತೇರ್ಗಡೆಯ ವಿದ್ಯಾರ್ಹತೆ ಹೊಂದಿರುವವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅದೇ ಸಮಯದಲ್ಲಿ, ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಮತ್ತು 23 ವರ್ಷಕ್ಕಿಂತ ಕಡಿಮೆ ಇರಬೇಕು. ಜನವರಿ 1, 2025 ರಂತೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೇತನ ಮಟ್ಟ 1 ರ ಅಡಿಯಲ್ಲಿ ರೂ 18,000 ರಿಂದ ರೂ 56,900 ರವರೆಗಿನ ಮೂಲ ವೇತನವನ್ನು ಪಡೆಯುತ್ತಾರೆ. ಇದರ ಹೊರತಾಗಿ, ಇತರ ಸರ್ಕಾರಿ ಭತ್ಯೆಗಳ ಪ್ರಯೋಜನಗಳು ಸಹ ಲಭ್ಯವಿರುತ್ತವೆ.

Sunday, September 1, 2024

ಜೋಳ


ಇಂದಿನ ದಿನಗಳಲ್ಲಿ ತೂಕ ನಿರ್ವಹಿಸುವುದೇ ಬಹುದೊಡ್ಡ ಸಮಸ್ಯೆ. ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ತೂಕ ಇಳಿಕೆ ಮಾಡುವುದು ಅಂತಹ ಕಷ್ಟವೇನಲ್ಲ. ಕಡಿಮೆ ಕೊಬ್ಬಿನಾಂಶವಿರುವ, ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಇವುಗಳಲ್ಲಿ ಜೋಳ ಬಹಳ ಮುಖ್ಯವಾದುದು. ಇದೊಂದು ಪೌಷ್ಟಿಕ ಧಾನ್ಯವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ತೂಕ ನಿರ್ವಹಣೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಫೈಬರ್, ಪ್ರೊಟೀನ್ ಮತ್ತು ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಜೋಳವು ತೂಕ ನಷ್ಟ ಆಹಾರಕ್ಕೆ ಅದ್ಭುತ ಸೇರ್ಪಡೆ. ತೂಕ ಇಳಿಕೆಯ ಗುರಿಯನ್ನು ತಲುಪಲು ಪ್ರಯತ್ನ ಪಡುವಾಗ ನಾಲಿಗೆ ರುಚಿ ಹುಡುಕಬಹುದು. ಹೀಗಾಗಿ ರುಚಿಕರವಾದ ಹಾಗೂ ಆರೋಗ್ಯಕರವಾದ ಜೋಳ ಪಾಕವಿಧಾನಗಳನ್ನು ಪ್ರಯತ್ನಿಸಬಹುದು. ಜೋಳ ರೆಸಿಪಿಗಳು ಇಲ್ಲಿವೆ:


ಜೋಳ ತರಕಾರಿ ಖಿಚಡಿ


ಬೇಕಾಗುವ ಪದಾರ್ಥಗಳು: ಜೋಳ- 1 ಕಪ್, ಹೆಸರು ಬೇಳೆ- 1/2 ಕಪ್, ಮಿಶ್ರ ತರಕಾರಿಗಳು (ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆ)- 1 ಕಪ್, ಜೀರಿಗೆ- 1 ಟೀ ಚಮಚ, ಅರಿಶಿನ ಪುಡಿ- 1/2 ಟೀ ಚಮಚ, ಗರಂ ಮಸಾಲಾ- 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ- 1 ಚಮಚ, ನೀರು- 3 ಕಪ್.

ಮಾಡುವ ವಿಧಾನ: ಜೋಳ ಮತ್ತು ಬೆಲ್ಲವನ್ನು ತೊಳೆದು, ಕನಿಷ್ಠ 1 ಗಂಟೆ ನೆನೆಸಿಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ ಹಾಕಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ, ಕೆಲವು ನಿಮಿಷಗಳ ಕಾಲ ಹುರಿಯಿರಿ. ಈ ಮಿಶ್ರಣಕ್ಕೆ ನೆನೆಸಿದ ಜೋಳ, ಹೆಸರು ಬೇಳೆ, ಅರಿಶಿನ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ 3 ಕಪ್ ನೀರು ಸೇರಿಸಿ, ಕಡಿಮೆ ಉರಿಯಲ್ಲಿ ಬೇಯಿಸಿ. ಕೊನೆಯದಾಗಿ ಬೇಕಿದ್ದರೆ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಹಾಕಬಹುದು.


ಜೋಳದ ದೋಸೆ


ಬೇಕಾಗುವ ಸಾಮಗ್ರಿ: ಜೋಳದ ಹಿಟ್ಟು- 1 ಕಪ್, ಗೋಧಿ ಹಿಟ್ಟು- 1/2 ಕಪ್, ಈರುಳ್ಳಿ- 1/2 ಕಪ್, ದೊಣ್ಣೆ ಮೆಣಸು- ½ ಕಪ್, ಪಾಲಕ್- ½ ಕಪ್, ಮಜ್ಜಿಗೆ- 1/2 ಕಪ್, ಮೊಟ್ಟೆ- 1 (ಬೇಕಿದ್ದರೆ ಮಾತ್ರ), ಬೇಕಿಂಗ್ ಪೌಡರ್- 1/2 ಟೀಚಮಚ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಆಲಿವ್ ಎಣ್ಣೆ- 1 ಚಮಚ.


ಮಾಡುವ ವಿಧಾನ: ಒಂದು ತಟ್ಟೆಯಲ್ಲಿ ಜೋಳದ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು ಮತ್ತು ಮೆಣಸಿನ ಪುಡಿ ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ಪಾಲಕ್ ಸೇರಿಸಿ. ಜೊತೆಗೆ ಮಜ್ಜಿಗೆ ಹಾಗೂ ಮೊಟ್ಟೆ (ಬೇಕಿದ್ದರೆ ಮಾತ್ರ) ಸೇರಿಸಿ, ಮಿಶ್ರಣ ಮಾಡಿ. ಇನ್ನೊಂದೆಡೆ ನಾನ್ ಸ್ಟಿಕ್ ಪ್ಯಾನ್ ಅನ್ನು ಸ್ವಲ್ಪ ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಮಿಶ್ರಣ ಮಾಡಿಟ್ಟಿರುವ ಹಿಟ್ಟನ್ನುದೋಸೆಯಂತೆ (ದಪ್ಪಗೆ) ಹರಡಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಬೇಯಿಸಿ, ಮೊಸರು ಅಥವಾ ಸಲಾಡ್‍ನೊಂದಿಗೆ ಬಡಿಸಬಹುದು.


ಜೋಳದ ಸಲಾಡ್


ಬೇಕಾಗುವ ಪದಾರ್ಥಗಳು: ಬೇಯಿಸಿದ ಜೋಳ- 1 ಕಪ್, ಕತ್ತರಿಸಿದ ಸೌತೆಕಾಯಿ- 1 ಕಪ್, ಟೊಮೆಟೊ- ½, ಈರುಳ್ಳಿ- 1/4 ಕಪ್, ಕೊತ್ತಂಬರಿ ಸೊಪ್ಪು- 1/4 ಕಪ್, ನಿಂಬೆ- 1, ಆಲಿವ್ ಎಣ್ಣೆ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ.


ಮಾಡುವ ವಿಧಾನ: ಒಂದು ಬೌಲ್‍ನಲ್ಲಿ ಸಣ್ಣಗೆ ಕತ್ತರಿಸಿದ ಸೌತೆಕಾಯಿ, ಟೊಮೆಟೊ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಜೊತೆಗೆ ಬೇಯಿಸಿದ ಜೋಳವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಒಂದು ನಿಂಬೆಯಿಂದ ರಸ ಹಿಂಡಿ ಹಾಕಿ. ಇದಕ್ಕೆ ಆಲಿವ್ ಎಣ್ಣೆ, ಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.


ಜೋಳದ ಇಡ್ಲಿ


ಬೇಕಾಗುವ ಪದಾರ್ಥಗಳು: ಜೋಳದ ಹಿಟ್ಟು- 1 ಕಪ್, ಅಕ್ಕಿ ಹಿಟ್ಟು- 1/2 ಕಪ್, ಮೊಸರು- 1/2 ಕಪ್, ಅಡುಗೆ ಸೋಡಾ- 1/2 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು- 1/2 ಕಪ್ (ಅಗತ್ಯವಿರುವಷ್ಟು), ಅಡುಗೆ ಎಣ್ಣೆ


ಮಾಡುವ ವಿಧಾನ: ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೊಸರು, ಅಡುಗೆ ಸೋಡಾ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಇಡ್ಲಿ ಹಿಟ್ಟಿನ ಹದಕ್ಕೆ ನೀರು ಸೇರಿಸಿ. ನಂತರ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ನಂತರ ಸ್ಟೀಮರ್‌ನಲ್ಲಿ ಇಡ್ಲಿ ಬೇಯಿಸಿ. ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ.


ಜೋಳದ ಸೂಪ್


ಬೇಕಾಗುವ ಪದಾರ್ಥಗಳು: ಜೋಳ- 1/2 ಕಪ್, ತರಕಾರಿಗಳು (ಕ್ಯಾರೆಟ್, ಕೊತ್ತಂಬರಿ ಸೊಪ್ಪು, ದೊಣ್ಣೆ ಮೆಣಸಿನಕಾಯಿ)- 1 ಕಪ್, ಬೆಳ್ಳುಳ್ಳಿ ಪುಡಿ- 1/2 ಟೀ ಚಮಚ, ಈರುಳ್ಳಿ ಪುಡಿ- 1/2 ಟೀಚಮಚ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ, ಆಲಿವ್ ಎಣ್ಣೆ- 1 ಚಮಚ


ಮಾಡುವ ವಿಧಾನ: ಜೋಳವನ್ನು ತೊಳೆದು ಬೇಯಿಸಿ. ಪ್ರತ್ಯೇಕ ಬಾಣಲೆಯಲ್ಲಿ, ಆಲಿವ್ ಎಣ್ಣೆಯನ್ನು ಹಾಕಿ, ಅದಕ್ಕೆ ಸಣ್ಣಗೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಇದಕ್ಕೆ ಜೋಳ ಜೊತೆಗೆ ಅದನ್ನು ಬೇಯಿಸುವಾಗ ಉಳಿದಿರುವ ನೀರನ್ನು ಸೇರಿಸಿ. ಇದಕ್ಕೆ ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ. 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಬಿಸಿ ಬಿಸಿಯಾಗಿ ಬಡಿಸಿ.